
ರೋಮ್ಗೆ ಬೆಂಕಿ ಬಿದ್ದಾಗ ರಾಜ ಪಿಟೀಲು ಬಾರಿಸುತ್ತಿದ್ದುದು ಯಾಕೋ ಗೊತ್ತಿಲ್ಲ. ಆದರೆ, ಕರ್ನಾಟಕ ಬಿಜೆಪಿಗೆ ಭಿನ್ನಮತದ ಬೆಂಕಿ ಬಿದ್ದಿರುವಾಗ ಅಮಿತ್ ಶಾ ಸುಮ್ಮನಿರುವುದು ಮಾತ್ರ ಯಾವುದೋ ನಿಗೂಢ ಕಾರಣಕ್ಕೆ ಎಂಬುದು ಸುಳ್ಳಲ್ಲ. ಅತ್ತ ಬಾಹುಬಲಿ -2 ಬಿಡುಗಡೆಯಾಗುತ್ತಿರುವಾಗ ಇತ್ತ ಈಶ್ವರಪ್ಪ-ಯಡಿಯೂರಪ್ಪ ಕದನದ 2ನೇ ಕಂತೂ ಅದ್ದೂರಿಯಾಗೇ ಬಿಡುಗಡೆಯಾಗಿದೆ. ಮನಸ್ಸು ಮಾಡಿದ್ದರೆ ಇಬ್ಬರೂ ತೆಪ್ಪಗಿರಿ ಎಂದು ಒಂದೇ ದೂರವಾಣಿ ಕರೆಯಲ್ಲಿ ಆದೇಶ ನೀಡಿ ಕದನವೇ ನಡೆಯದಂತೆ ಅಮಿತ್ ಶಾ ಮಾಡಬಹುದಿತ್ತು. ಆದರೆ, ಅಮಿತ್ ಶಾ ಹಾಗೆ ಮಾಡದೇ ಯುದ್ಧ ನಡೆಯಲು ಬಿಟ್ಟಿದ್ದಾರೆ. ಹಾಗಾದರೆ, ಯುದ್ಧ ನೋಡುತ್ತಾ ಅಮಿತ್ ಶಾ ಸುಮ್ಮನಿರೋದು ಏಕೆ? ಅವರಿಗೆ ಯಡಿಯೂರಪ್ಪ-ಈಶ್ವರಪ್ಪ ಯುದ್ಧ ನಡೆಯೋದು ಬೇಕಿತ್ತಾ? ಅವರ ತಲೆಯಲ್ಲಿ ಏನಿದೆ ಎಂಬುದು ಬಾಹುಬಲಿ-ಕಟ್ಟಪ್ಪ ರಹಸ್ಯಕ್ಕಿಂತ ದೊಡ್ಡ ರಹಸ್ಯ ಎನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.