ನ್ಯಾಯಮೂರ್ತಿ ಕರ್ಣನ್ ಬಂಧನ

By Suvarna Web DeskFirst Published Jun 20, 2017, 8:27 PM IST
Highlights

ಪಶ್ಚಿಮ ಬಂಗಾಳದ ಹೈಕೋರ್ಟ್'ನ ನ್ಯಾಯಮೂರ್ತಿಯಾಗಿದ್ದಕರ್ಣನ್ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತೀ ಹೆಚ್ಚು ವಿವಾದಕ್ಕೊಳಗಾಗದವರು. ಇವರ ವಿವಾದಾತ್ಮಕ ಹೇಳಿಕೆಗಳಿಂದ ನ್ಯಾಯಾಂಗ ವ್ಯವಸ್ಥೆಯೆ ತಲೆ ತಗ್ಗಿಸುವಂತಾಗಿತ್ತು. ಸುಪ್ರಿಂ ಮುಖ್ಯ ನ್ಯಾಯಾಧೀಶರು ಸೇರಿದಂತೆ 7 ನ್ಯಾಯಾಧೀಶರ ವಿರುದ್ಧವೇ ಬಂಧನದ ವಾರಂಟ್ ಹೊರಡಿಸಿದ್ದರು.

ಕೊಯಮತ್ತೂರು(ಜೂ.20): ವಿವಾದಾತ್ಮಕ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನು  ಪಶ್ಚಿಮ ಬಂಗಾಳದ ಸಿಐಡಿ ತಂಡ ಕೊಯಮತ್ತೂರಿನಲ್ಲಿ ಬಂಧಿಸಿದ್ದು, ನಾಳೆ ಕೋಲ್ಕತ್ತಾಗೆ ಕರೆತರಲಾಗುತ್ತದೆ ಎಂದು ಡಿಎನ್'ಎ ವೆಬ್'ಸೈಟ್ ವರದಿ ಮಾ

ಪಶ್ಚಿಮ ಬಂಗಾಳದ ಹೈಕೋರ್ಟ್'ನ ನ್ಯಾಯಮೂರ್ತಿಯಾಗಿದ್ದ  ಕರ್ಣನ್  ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತೀ ಹೆಚ್ಚು ವಿವಾದಕ್ಕೊಳಗಾಗದವರು. ಇವರ ವಿವಾದಾತ್ಮಕ ಹೇಳಿಕೆಗಳಿಂದ ನ್ಯಾಯಾಂಗ ವ್ಯವಸ್ಥೆಯೆ ತಲೆ ತಗ್ಗಿಸುವಂತಾಗಿತ್ತು. ಸುಪ್ರಿಂ ಮುಖ್ಯ ನ್ಯಾಯಾಧೀಶರು ಸೇರಿದಂತೆ 7 ನ್ಯಾಯಾಧೀಶರ ವಿರುದ್ಧವೇ ಬಂಧನದ ವಾರಂಟ್ ಹೊರಡಿಸಿದ್ದರು.

ಈ ತೀರ್ಪನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಮೇ 9 ರಂದು ಕರ್ಣನ್ ಅವರನ್ನು ನ್ಯಾಯಾಂಗ ನಿಂದನೆಯ ಆಪಾದನೆಯ ಮೇಲೆ 6 ತಿಂಗಳ ಜೈಲು ವಾಸದ ಶಿಕ್ಷೆ ವಿಧಿಸಿತ್ತು. ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ  ಹೈಕೋರ್ಟ್'ನ ಹಾಲಿ ಮುಖ್ಯ ನ್ಯಾಯಾಧೀಶರೊಬ್ಬರನ್ನು ಜೈಲು ಶಿಕ್ಷೆಗೆ ಒಳಪಡಿಸಿದ್ದು ಇದೆ ಮೊದಲಾಗಿತ್ತು. ಅಂದಿನಿಂದ ತಲೆ ತಪ್ಪಿಸಿಕೊಂಡಿದ್ದ  ಇವರು ಇಂದು ಬಂಧಿತರಾಗಿದ್ದಾರೆ. ಅದಲ್ಲದೆ ಜೂನ್ 12 ರಂದು ಇವರ ಅಧಿಕಾರವಧಿ ಮುಕ್ತಾಯವಾಗಿತ್ತು.

click me!