‘ಯುಎಇ ದುಡ್ಡಿಗಾಗಿ ಮೋದಿ ಜೊತೆ ಮಾತಾಡ್ತೀನಿ ಬಿಡಿ’!

By Web DeskFirst Published Aug 23, 2018, 5:20 PM IST
Highlights

ಯುಎಇ ನೆರವು ಪಡೆಯಲು ಅಡ್ಡಿಯಿಲ್ಲ! ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟನೆ! ಪ್ರಧಾನಿ ಮೋದಿ ಜೊತೆ ಮಾತಾಡೋದಾಗಿ ಸ್ಪಷ್ಟನೆ! ವಿದೇಶಗಳಿಂದ ಆರ್ಥಿಕ ನೆರವು ಪಡೆಯಲು ಅಡ್ಡಿಯಿಲ್ಲ 
 

ತಿರುವನಂತಪುರಂ(ಆ.23): ಕೇರಳ ನೆರೆ ಸಂತ್ರಸ್ತರಿಗೆ ಯುಎಇ  ನೀಡಿರುವ ಆರ್ಥಿಕ ನೆರವು ಪಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. 

ನೆರೆ ಸಂತ್ರಸ್ತರಿಗೆ ವಿದೇಶಗಳು ನೀಡಿರುವ ಆರ್ಥಿಕ ನೆರವನ್ನು ಸ್ವೀಕರಿಸುವುದಕ್ಕೆ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಣರಾಯಿ ವಿಜಯನ್, ಕೇರಳ ನೆರೆ ಸಂತ್ರಸ್ತರಿಗೆ ಯುಎಇ  ನೀಡಿರುವ ಆರ್ಥಿಕ ನೆರವು ಪಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಅಗತ್ಯವಿದ್ದಲ್ಲಿ ಪ್ರಧಾನಿ ಜೊತೆಗೂ ಮಾತುಕತೆ ನಡೆಸುವುದಾಗಿ ವಿಜಯನ್ ತಿಳಿಸಿದ್ದಾರೆ. 

Latest Videos

2016 ರ ವಿಪತ್ತು ನಿರ್ವಹಣಾ ನೀತಿಯನ್ನು ಉಲ್ಲೇಖಿಸಿರುವ ವಿಜಯನ್ ನೆರೆ ಸಂತ್ರಸ್ತರಿಗೆ ವಿದೇಶಗಳು ಆರ್ಥಿಕ ನೆರವು ನೀಡಿದರೆ ಅದನ್ನು ಸ್ವೀಕರಿಸಬಹುದು ಎಂದು ಹೇಳಿದ್ದಾರೆ. 
 

click me!