
ಕಾರವಾರ (ಜ.04): ಸ್ವಾತಂತ್ರ್ಯ ಬಂದೂ ಅರವತ್ತು ವರ್ಷ ಕಳೆದರೂ ಈ ಭಾಗದ ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಲೋ ಮೀಟರ್ ಹಳ್ಳದಾಟಿ ನೀರು ತರುವ ಅನಿವಾರ್ಯ ಎದುರಾಗಿದೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೆಜೂಗ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಭಾರೀ ಕಷ್ಟ ಪಡುತ್ತಿದ್ದಾರೆ. ಈ ಮೊದಲು ಈ ಗ್ರಾಮಕ್ಕೆ ಕಟ್ಟಿಗೆಯ ಸೇತುವೆಯಿತ್ತು. ಆದರೆ ಈಗ ಆ ಸೇತುವೆ ಮುರಿದು ಬಿದ್ದು ಮೂರು ವರ್ಷಗಳಾಗಿವೆ. ಸಂಬಂಧ ಪಟ್ಟವರಿಗೆ ತಿಳಿಸಿದ್ರೂ ಸಹ ಹಳ್ಳಕ್ಕೆ ಮತ್ತೆ ಸೇತುವೆ ಭಾಗ್ಯ ಸಿಕ್ಕಿಲ್ಲ. ಅಂಬೆಜೂಗ ಜನರು ತೂಗು ಸೇತುವೆ ನಿರ್ಮಿಸಿ ಕೊಡುವಂತೆ ಅನೇಕ ಬಾರಿ ಸರಕಾರದ ಮುಂದೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಗಲಿ ಗಮನ ನೀಡಿಲ್ಲ. ಈ ಜನರ ಕಷ್ಟಕ್ಕೆ ಇನ್ನಾದರೂ ಸರಕಾರ ಸ್ಪಂಧಿಸುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.