ಜೈಪುರ ವಿಮಾನ ನಿಲ್ದಾಣದಲ್ಲಿ ಶಶಿ ತರೂರ್ ಬಂಧನ ವದಂತಿ

By Suvarna Web DeskFirst Published Jan 26, 2018, 8:36 AM IST
Highlights

ಪಿಸ್ತೂಲ್ ಅನ್ನು ಇಟ್ಟುಕೊಂಡ ಕಾರಣಕ್ಕೆ ಜೈಪುರ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಸುದ್ದಿಯಾಗಿತ್ತು. ಆದರೆ, ಶಶಿ ತರೂರ್ ಅವರನ್ನು ವಶಕ್ಕೆ ಪಡೆಯಲಾಗಿಲ್ಲ. ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಜೈಪುರ: ಪಿಸ್ತೂಲ್ ಅನ್ನು ಇಟ್ಟುಕೊಂಡ ಕಾರಣಕ್ಕೆ ಜೈಪುರ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಸುದ್ದಿಯಾಗಿತ್ತು. ಆದರೆ, ಶಶಿ ತರೂರ್ ಅವರನ್ನು ವಶಕ್ಕೆ ಪಡೆಯಲಾಗಿಲ್ಲ. ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಜೈಪುರ ವಿಮಾನ ನಿಲ್ದಾಣದಲ್ಲಿ ತಮ್ಮ ಸೋದರಿಯ ಬರುವಿಕೆಗಾಗಿ ಶಶಿ ತರೂರ್ ಕಾಯುತ್ತಿದ್ದರು. ಈ ವೇಳೆ ಯಾರೋ ಒಬ್ಬರು ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ ಎಂದು ಕೇಳಿದ್ದು, ಅದಕ್ಕೆ ಶಶಿ ತರೂರ್ ‘ಮೈ ಸಿಸ್ಟರ್’ ಎಂದು ಹೇಳಿದ್ದರು.

ಆದರೆ, ಅದನ್ನು ಪಿಸ್ತೂಲ್ ಎಂದು ಅರ್ಥ ಮಾಡಿಕೊಂಡ ಆತ ಭದ್ರತಾ ಪಡೆಗಳಿಗೆ ಮಾಹಿತಿ ನಿಡಿದ್ದ. ಬಳಿಕ ಈ ವಿಷಯವಾಗಿ ಶಶಿ ತರೂರ್ ಸ್ಪಷ್ಟನೆ ನೀಡಿದ್ದು, ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.

click me!