
ಮದ್ದೂರು (ಜ.30): ಯಡಿಯೂರಪ್ಪ ನನ್ನನು ಭೇಟಿ ಮಾಡಲು ಸಮಯ ಕೇಳಿರುವುದು ಎಲ್ಲಾ ಊಹಾಪೋಹ, ನನ್ನ ಮುಂದಿನ ನಡೆ ಏನೆಂಬದನ್ನು ಕಾದು ನೋಡಿ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಮತ್ತು ಮದ್ದೂರು ನನ್ನ ತವರು ಕ್ಷೇತ್ರ, ನಾನು ಮೊದಲು ಕಾಂಗ್ರೆಸ್ ವಿರುದ್ದವೇ ಗೆದ್ದು ಬಂದವನು ಎಂದು ಅವರು ಹೇಳಿದ್ದಾರೆ.
ನಾನು ಪಕ್ಷ ಬಿಟ್ಟಿದ್ದೇನೇ ಹೊರತು ರಾಜಕೀಯ ಬಿಟ್ಟಿಲ್ಲ, ನನ್ನ ಜೊತೆ ಬನ್ನಿ ಅಂತಾ ಯಾರನ್ನು ಕರೆದಿಲ್ಲ ಹಾಗೂ ಹೊಸ ಪಕ್ಷ ಕಟ್ಟುವ ಆಲೋಚನೆಯೂ ನನಗಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಬಲಿಗರೊಂದಿಗೆ ಸಭೆ ನಡೆಸಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.