ಸುಪ್ರೀಂಕೋರ್ಟ್'ನಿಂದ ಬಿಸಿಸಿಐಗೆ ನೂತನ ಆಡಳಿಗಾರರ ನೇಮಕ

Published : Jan 30, 2017, 12:18 PM ISTUpdated : Apr 11, 2018, 12:36 PM IST
ಸುಪ್ರೀಂಕೋರ್ಟ್'ನಿಂದ ಬಿಸಿಸಿಐಗೆ ನೂತನ ಆಡಳಿಗಾರರ ನೇಮಕ

ಸಾರಾಂಶ

ವಿವಿಧ ಕ್ಷೇತ್ರಗಳಿಂದ ಬಂದಿರುವ ಈ ನಾಲ್ವರ ಕೈಯಲ್ಲಿ ಬಿಸಿಸಿಐ ಆಡಳಿತ ನಡೆಯಲಿದೆ.

ನವದೆಹಲಿ(ಜ. 30): ಮಾಜಿ ಮಹಾಲೇಖಪಾಲ ವಿನೋದ್ ರಾಯ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿಯು ಬಿಸಿಸಿಐನ ಆಡಳಿತ ಚುಕ್ಕಾಣಿ ಹಿಡಿಯಲಿದೆ. ವಿನೋದ್ ರಾಯ್, ರಾಮಚಂದ್ರ ಗುಹಾ, ವಿಕ್ರಮ್ ಲಿಮಾಯೆ ಮತ್ತು ಡಯಾನಾ ಎಡುಲ್'ಜೀ ಅವರಿರುವ ಸಮಿತಿಯನ್ನು ಸುಪ್ರೀಂಕೋರ್ಟ್ ರಚಿಸಿ ಆದೇಶ ಹೊರಡಿಸಿದೆ. ವಿವಿಧ ಕ್ಷೇತ್ರಗಳಿಂದ ಬಂದಿರುವ ಈ ನಾಲ್ವರ ಕೈಯಲ್ಲಿ ಬಿಸಿಸಿಐ ಆಡಳಿತ ನಡೆಯಲಿದೆ. ಅಮಿಕಸ್ ಕ್ಯೂರೀ(ತಟಸ್ಥ ಸಲಹೆಗಾರರು)ಗಳಾದ ಗೋಪಾಲ್ ಸುಬ್ರಮಣಿಯಮ್ ಮತ್ತು ಅನಿಲ್ ದಿವಾನ್ ಅವರು ಬಿಸಿಸಿಐ ಆಡಳಿತಗಾರರಾಗಿ ನೇಮಿಸಬೇಕೆಂದು ಸಲಹೆ ನೀಡಲಾಗಿದ್ದ 9 ಹೆಸರನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿ ಈ ಆದೇಶ ಹೊರಡಿಸಿದೆ.

ಯಾರು ಈ ನಾಲ್ವರು?
1) ವಿನೋದ್ ರಾಯ್: ಮಾಜಿ ಮಹಾಲೇಖಪಾಲ
2) ರಾಮಚಂದ್ರ ಗುಹಾ: ಖ್ಯಾತ ಇತಿಹಾಸಕಾರ ಮತ್ತು ಅಂಕಣಕಾರ
3) ವಿಕ್ರಮ್ ಲಿಮಾಯೆ: ಇನ್'ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಂಪನಿಯ ನಿರ್ವಾಹಕ ನಿರ್ದೇಶಕರು
4) ಡಯಾನಾ ಎಡುಲ್ಜೀ: ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ

ಈ ಸಮಿತಿಯನ್ನಷ್ಟೇ ಅಲ್ಲ, ಮೂವರು ಸದಸ್ಯರ ಆಯೋಗವೊಂದನ್ನೂ ಸುಪ್ರೀಂಕೋರ್ಟ್ ರಚಿಸಿದೆ. ಬಿಸಿಸಿಐನ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ್ ಚೌಧರಿ ಮತ್ತು ವಿಕ್ರಮ್ ಲಿಮಯೆ ಅವರು ಈ ಆಯೋಗದಲ್ಲಿರುತ್ತಾರೆ. ಫೆ.2ರಿಂದ ಮೂರು ದಿನಗಳ ಕಾಲ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಈ ಆಯೋಗವು ಪ್ರತಿನಿಧಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ
DRDO ನೇಮಕಾತಿ, ಬರೋಬ್ಬರಿ 764 ತಾಂತ್ರಿಕ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ