ವಿಟಿಯು ಅನರ್ಹ ಬೋಧಕರ ನೇಮಕಾತಿಗೆ ಕುತ್ತು?

Published : Jul 13, 2018, 08:22 PM IST
ವಿಟಿಯು ಅನರ್ಹ ಬೋಧಕರ ನೇಮಕಾತಿಗೆ ಕುತ್ತು?

ಸಾರಾಂಶ

ವಿಟಿಯು ಅನರ್ಹ ಬೋಧಕರ ನೇಮಕಾತಿ ವಿಚಾರ 64 ಬೋಧಕರಿಗೆ ಕುಲಸಚಿವರಿಂದ ನೋಟಿಸ್ ಜಾರಿ ನೋಟಿಸ್ ಜಾರಿ ಮಾಡಿದ ಕುಲಸಚಿವ ಪ್ರೊ.ಜಗನ್ನಾಥ ನೋಟಿಸ್ ಗೆ ೧೫ ದಿನದೊಳಗೆ ಉತ್ತರಿಸುವಂತೆ ಸೂಚನೆ   

ಬೆಳಗಾವಿ(ಜು.13): ಆದಾಯ ಪ್ರಮಾಣ ಪತ್ರ ಮತ್ತು ಪಿಹೆಚ್ ಡಿ ಪದವಿ ಪಡೆಯದ 64 ಬೋಧಕರಿಗೆ ವಿಟಿಯು ಕುಲಸಚಿವರು ನೋಟಿಸ್ ಜಾರಿ ಮಾಡಿದ್ದಾರೆ. 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಿದ ವಿಟಿಯು ಕುಲಸಚಿವ ಪ್ರೊ.ಜಗನ್ನಾಥ ರೆಡ್ಡಿ, ೧೫ ದಿನದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಕುಲಪತಿ ಡಾ.ಮಹೇಶಪ್ಪ ಆಧಿಕಾರದ ಅವಧಿಯಲ್ಲಿ ಈ ಹುದ್ದೆಗಳು ಭರ್ತಿಯಾಗಿದ್ದು, ಇದರಲ್ಲಿ ಲಂಚ ಪಡೆದ ಆರೋಪ ಕೂಡ ಕೇಳಿ ಬಂದಿತ್ತು. ಕಲಬುರಗಿ, ಮೈಸೂರು, ಮುದ್ದೇನಹಳ್ಳಿಯ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಈ ಬೋಧಕರನ್ನು ನೇಮಿಸಲಾಗಿತ್ತು.

ಈ ಅಕ್ರಮದ ಬಗ್ಗೆ 2017 ರಲ್ಲಿ ಸರ್ಕಾರ ನ್ಯಾ .ಕೇಶವನಾರಾಯಣ ಸಮಿತಿ ರಚಿಸಿತ್ತು. ಅನರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಂಡಿರುವುದಾಗಿ ಈ ಸಮಿತಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು.

ಇದೀಗ ಬೋಧಕರ ಪ್ರೊಬೆಷನರಿ ಅವಧಿ ಮುಕ್ತಾಯಗೊಂಡಿದ್ದು, ಬೋಧಕರ ಆರ್ಹತೆ ಪರಿಶೀಲನೆಗೆ ವಿಟಿಯು‌ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಈ 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!