
ಬೆಂಗಳೂರು(ಫೆ.13): ಒಕ್ಕಲಿಗರ ಸಂಘದ ಕುರ್ಚಿ ಜಗಳ ಮತ್ತೆ ಮುಂದುವರಿದಿದೆ. ಸಂಘದ ಘನತೆಗೆ ಚ್ಯತಿ ತರಬೇಡವೆಂದರೂ ಸಂಘದ ನಿರ್ದೇಶಕರು ಮಾತ್ರ ಕುರ್ಚಿಗಾಗಿ ಕಿತ್ತಾಡುವುದನ್ನು ಬಿಡುತ್ತಿಲ್ಲ. ಇತ್ತೀಚಿಗಷ್ಟೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಂಘದಲ್ಲಿ ಯಾವುದೇ ಸಭೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಆದರೆ ವಜಾಗೊಂಡಿರುವ ಅಪ್ಪಾಜಿ ಗೌಡ ನೇತೃತ್ವದಲ್ಲಿ ಅಪ್ಪಾಜಿಗೌಡ, ಮಹದೇವ್, ಪ್ರಸನ್ನ, ವೆಂಕಟೇಶ್, ಶಿವಣ್ಣ, ಮುನೇಗೌಡ, ಉಲ್ಲೂರು ಮಂಜು, ನಾಗರಾಜು, ಕಾಡೇಗೌಡ ಮುಂತಾದವರು ಭಾಗಿಯಾಗಿ ಸಂಘದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಬೆಟ್ಟೆಗೌಡ ಅವರನ್ನು ವಜಾಮಾಡಿ ಮುಂದಿನ ಅಧ್ಯಕ್ಷ ಚುನಾವಣೆ ಘೋಷಣೆ ಸಾದ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.