ವಿನಾಯಕ್ ಬಾಳಿಗ ಹತ್ಯೆ: ಇನ್ನೂ ಮುಗಿಯದ ತನಿಖೆ

Published : Nov 26, 2016, 02:35 PM ISTUpdated : Apr 11, 2018, 12:42 PM IST
ವಿನಾಯಕ್ ಬಾಳಿಗ ಹತ್ಯೆ: ಇನ್ನೂ ಮುಗಿಯದ ತನಿಖೆ

ಸಾರಾಂಶ

ಪ್ರಕರಣ ನಡೆದು ಒಂಭತ್ತು ತಿಂಗಳಾದರೂ ನರೇಶ್ ಶೆಣೈ ನಂತರದ ತನಿಖೆ ಆಗಿಲ್ಲ. ಪ್ರಮುಖ ಆರೋಪಿ ನಮೋ ಬ್ರಿಗೇಡ್'ನ ನರೇಶ್ ಶೆಣೈ ಜಾಮೀನು ರದ್ದತಿಗೆ  ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

ಮಂಗಳೂರು (ನ.26): ಆರ್​ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಕುರಿತು ಮಂಗಳೂರಿನಲ್ಲಿ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹೇಳಿಕೆ ನೀಡಿದ್ದಾರೆ.  

ಪ್ರಕರಣ ನಡೆದು ಒಂಭತ್ತು ತಿಂಗಳಾದರೂ ನರೇಶ್ ಶೆಣೈ ನಂತರದ ತನಿಖೆ ಆಗಿಲ್ಲ. ಪ್ರಮುಖ ಆರೋಪಿ ನಮೋ ಬ್ರಿಗೇಡ್'ನ ನರೇಶ್ ಶೆಣೈ ಜಾಮೀನು ರದ್ದತಿಗೆ  ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದಿದ್ದಾರೆ.

ಅಮಾಯಕರಾದರೆ ನರೇಶ್ ಶೆಣೈ ಯಾಕೆ ಮಂಪರು ಪರೀಕ್ಷೆ ಗೆ  ಹಿಂಜರಿಯುತ್ತಿದ್ದಾರೆ? ನರೇಶ್ ಶೆಣೈ ಮಂಪರು ಪರೀಕ್ಷೆಗೆ ಸಮ್ಮತಿಸಲಿ.

ಶ್ರೀಗಳಿಗೆ ಬರೆದ ಪತ್ರವೇ ಬಾಳಿಗಾ ಹತ್ಯೆಗೆ ಪ್ರಮುಖ ಕಾರಣ. ಈ ಪತ್ರದ ಬಗ್ಗೆ ಸ್ವಾಮೀಜಿ ಮಾಹಿತಿ ನೀಡಲಿ. ವಿಚಾರಣೆ ವೇಳೆ ಕಾಶಿ ಮಠಾಧೀಶರಿಗೆ ಸಮನ್ಸ್ ಇದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಪ್ರತಿನಿಧಿಯನ್ನು ಕಳುಹಿಸಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ