
ಇಬ್ರಾಹಿಂಪಟ್ಟಣದಲ್ಲಿ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡ, ಹೊಸ 2000 ರೂಪಾಯಿ ನೋಟು ಸೇರಿ ಹಲವು ಕರೆನ್ಸಿಗಳನ್ನೊಳಗೊಂಡ 2.22,310 ರೂ,ನಷ್ಟು ನಕಲಿ ನೋಟು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಮಹೇಶ್ ಭಗವತಿ ತಿಳಿಸಿದ್ದಾರೆ.
ಜಮಲಾಪುರ್ ಸಾಯಿನಾಥ್, ಜಿ. ಅಂಜಯ್ಯ, ಎಸ್. ರಮೇಶ್, ಸಿ. ಸತ್ಯನಾರಾಯಣ, ಕೆ. ಶ್ರೀಧರ್ ಗೌಡ, ಎ. ವಿಜಯ್ ಕುಮಾರ್ ಬಂಧಿತರು. ಕಲ್ಯಾಣ್ ಮತ್ತು ಶ್ರೀಕಾಂತ್ ಎಂಬುವವರು ತಪ್ಪಿಸಿಕೊಮಡಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಕಂತೆ ಕಂತೆ ನೋಟುಗಳನ್ನ ಮುದ್ರಿಸಿ ಚಲಾವಣೆ ಯೋಜನೆ ರೂಪಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ನಕಲಿ ನೋಟುಗಳನ್ನ ವಶಪಡಿಸಿಕೊಂಡಿದೆ. 2000 ನೋಟಿನ ಜೊತೆ 100, 50, 20 ಮತ್ತು 10 ರೂಪಾಯಿಯ ನಕಲಿ ನೋಟುಗಳೂ ಸಿಕ್ಕಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.