
ಬಿಸ್ವಾನಾಥ್[ಸೆ.28] ಈಗ ನೋಡುತ್ತಿರುವುದು ಅಸ್ಸಾಂ ರಾಜ್ಯದ ಬಿಸ್ವಾನಾಥ್ ಜಿಲ್ಲೆಯ ದೃಶ್ಯ. ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ಈ ಪ್ರದೇಶದಲ್ಲಿ ಮಕ್ಕಳು ದಿನನಿತ್ಯ ಶಾಲೆಗೆ ತೆರಳುವುದೇ ದೊಡ್ಡ ಸಾಹಸವಾಗಿದೆ.
ನದಿಯೊಂದನ್ನು ದಾಟಿ ಶಾಲೆಗೆ ಹೋಗಬೇಕು. ಆದರೆ ಸೇತುವೆ ಭಾಗ್ಯ ಈ ಊರಿಗೆ ಇಲ್ಲ. ಅದರಿರಲಿ ದೋಣಿ, ತೆಪ್ಪ ಯಾವುದಾದರೂ ಇದೆಯೇ? ಅದು ಇಲ್ಲ. ಸದ್ಯ ಇವರಿಗೆ ಅಮ್ಯೂಮಿನಿಯಂ ಪಾತ್ರೆಯೆ ದೋಣಿ೦ತೆಪ್ಪ-ಸೇತುವೆ ಎಲ್ಲ.
ಮಕ್ಕಳು ಅಲ್ಯೂಮಿನಿಯಂ ಪಾತ್ರೆ ಬಳಸಿ ಹೊಳೆ ದಾಟುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಮೇಲಾದರೂ ಸಂಬಂಧಿಸಿದ ಸರಕಾರ ಪರಿಹಾರ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.