ವಾಟಾಳ್ ‘ಕರ್ನಾಟಕದ ಉಕ್ಕಿನ ಮನುಷ್ಯ'

Published : Apr 16, 2017, 09:46 AM ISTUpdated : Apr 11, 2018, 12:49 PM IST
ವಾಟಾಳ್ ‘ಕರ್ನಾಟಕದ ಉಕ್ಕಿನ ಮನುಷ್ಯ'

ಸಾರಾಂಶ

ಚಿತ್ರರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ವಾಟಾಳ್‌ ಅವರ ಕೊಡುಗೆ ಅಪಾರವಾದುದು. ವಾಟಾ​ಳ್‌ ಬಯಸಿ​ದ್ದರೆ ಮುಖ್ಯಮಂತ್ರಿ ಆಗಬಹು​ದಿತ್ತು. ಆದರೆ, ಯಾವ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ, ಪಕ್ಷಾಂತರಗೊಳ್ಳದೆ ಕನ್ನಡಪರ ಚಳವಳಿಗೆ ತಮ್ಮನ್ನು ಅರ್ಪಿ​ಸಿಕೊಂಡರು.

ಬೆಂಗಳೂರು(ಏ.16):ಮುಂಬರುವ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೇ ಕನ್ನಡ ಚಳವಳಿ ಹೋ ರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಗೆಲ್ಲಿ ಸಲು ಕನ್ನಡಪರ ಕಾರ್ಯಕರ್ತರು ಪ್ರಯತ್ನ ಮಾಡ ಬೇಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಜಾಗೃತಿ ವೇದಿಕೆ ಆಯೋಜಿಸಿದ್ದ ‘ಕರ್ನಾಟಕದ ಉಕ್ಕಿನ ಮನುಷ್ಯ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತ​ನಾಡಿದ ಅವರು, ವಾಟಾಳ್‌ ನಾಗರಾಜ್‌ ಅವರಿ ಲ್ಲದೆ ವಿಧಾನಸಭೆ ಇಂದು ತಬ್ಬಲಿ​ಯಾಗಿದೆ. ಕನ್ನಡ ನಾಡು, ನುಡಿ, ಜಲ ವಿಷಯದಲ್ಲಿ ಯಾರೊಬ್ಬರೂ ಚಕಾರವೆ​ತ್ತುತ್ತಿಲ್ಲ. ಕನ್ನಡ ಹಾಗೂ ಕನ್ನಡಿಗರ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ಹಾಗಾಗಿ ಅವರನ್ನು ವಿಧಾನಸ​ಭೆಗೆ ಆಯ್ಕೆ ಮಾಡಿ ಕಳುಹಿಸುವಲ್ಲಿ ಕನ್ನಡಪರ ಹೋ​ರಾಟಗಾರರು, ಕಾರ್ಯಕರ್ತರು ಸಕ್ರಿ​ಯ​ವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಚಿತ್ರರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ವಾಟಾಳ್‌ ಅವರ ಕೊಡುಗೆ ಅಪಾರವಾದುದು. ವಾಟಾ​ಳ್‌ ಬಯಸಿ​ದ್ದರೆ ಮುಖ್ಯಮಂತ್ರಿ ಆಗಬಹು​ದಿತ್ತು. ಆದರೆ, ಯಾವ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ, ಪಕ್ಷಾಂತರಗೊಳ್ಳದೆ ಕನ್ನಡಪರ ಚಳವಳಿಗೆ ತಮ್ಮನ್ನು ಅರ್ಪಿ​ಸಿಕೊಂಡರು. ಚಾಮರಾಜನಗರದ ಜನತೆ ಹಣ, ಹೆಂಡಕ್ಕೆ ಪ್ರಾಮುಖ್ಯತೆ ನೀಡದೆ ಕನ್ನಡಪರ ಹೋರಾಟಗಾರನನ್ನು ಗೆಲ್ಲಿಸ​ಬೇಕು.

 

ಕನ್ನಡ ನೆಲ-ಜಲ ವಿಚಾರದಲ್ಲಿ ವಾಟಾಳ್‌ ಅವರು ಕೈಗೊಂಡ ನಿರ್ಣಯಕ್ಕೆ ಎಲ್ಲಾ ಕನ್ನಡಿಗರು ಬದ್ಧರಾಗಬೇಕು ಎಂ ದರು. ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್‌ ಅವರು ವಾಟಾಳ್‌ ನಾಗ ರಾಜ್‌ ಅವರಿಗೆ ಕರ್ನಾಟಕದ ಉಕ್ಕಿನ ಮನುಷ್ಯ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ. ಮಂಜುನಾಥ್‌ ದೇವ, ಕನ್ನಡ ಸೇನೆ ಅಧ್ಯಕ್ಷ ಕೆ.ಆರ್‌. ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾ ಮೇಗೌಡ, ಕನ್ನಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್‌ಗೌಡ, ಪಾರ್ಥ ಸಾರಥಿ, ಚಿತ್ರ ಸಾಹಿತಿ ಸಿ.ಬಿ. ಶಿವಶಂಕರ್‌, ಕನ್ನಡಪರ ಹೋರಾಟಗಾರ ವೆಂಕಟೇಶ್‌, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಆನೇಕಲ್‌ ವಿಧಾತ ವಿದ್ಯಾಸಂಸ್ಥೆ ಸಂಸ್ಥಾಪಕ ತಾನಂ ಕುಮಾರಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

 

ರಾಜ್ಯದ ಮೂಲೆ ಮೂಲೆಗೆ ಹೋದರೂ ಜನರು ಪ್ರೀತಿ, ಅಭಿಮಾನದಿಂದ ಬರಮಾಡಿಕೊಳ್ಳುತ್ತಾರೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ. ಮುಂಬರುವ 2018ರ ಚುನಾವಣೆಗೆ ಕನ್ನಡಪರ ಅಭ್ಯರ್ಥಿ ಗೆಲ್ಲಿಸಲು ರೈತರು, ಕನ್ನಡ ಸಂಘಟನೆಗಳು, ಪ್ರಗತಿಪರರೆಲ್ಲ ಒಗ್ಗಟ್ಟಾಗಬೇಕು. ಎಲ್ಲೆಲ್ಲೂ ಕನ್ನಡ ಮೊಳಗಬೇಕು. ವಿಧಾನಸೌಧದ ಮೇಲೆ ಕನ್ನಡ ಧ್ವಜ ಹಾರಾಡಬೇಕು. ಮಹಾತ್ಮ ಗಾಂಧಿಯವರು ಕೈಗೊಂಡ ಉಪ್ಪಿನ ಸತ್ಯಾಗ್ರಹದಂತೆ ಮನೆ ಮನೆಗೂ ಉಪ್ಪನ್ನು ಹಂಚುವ ಮೂಲಕ ಪ್ರಚಾರ ಮಾಡುತ್ತೇನೆ. ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳನ್ನು ಗೆಲ್ಲದಿದ್ದಲ್ಲಿ ಹೋರಾಟದಿಂದ ಹಿಂದೆ ಸರಿಯುತ್ತೇನೆ.
-ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿ ಹೋರಾಟಗಾರ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉ.ಕ. ಪರ ಕೇಂದ್ರಕ್ಕೆ ಅಸೆಂಬ್ಲಿ 7 ನಿರ್ಣಯ
ಚುನಾವಣಾ ಆಯೋಗ ಆದೇಶಕ್ಕೂ ಮೊದಲೇ ಧಾರವಾಡದಲ್ಲಿ ಎಸ್ಐಆರ್