
ಕಾನ್ಪುರ (ಡಿ.24): ಮೃತಪಟ್ಟ 40 ವರ್ಷದ ಬಳಿಕ ಮಹಿಳೆಯೊಬ್ಬಳು ಬದುಕಿ ಬಂದ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.
ಬಿದ್ನೂ ಎಂಬ ಗ್ರಾಮದ 82 ವರ್ಷ ಪ್ರಾಯದ ವಿಲಾಸ ಎಂಬ ಮಹಿಳೆಯೊಬ್ಬಳು 1976ರಲ್ಲಿ ಹಾವು ಕಡಿತದಿಂದ ಸಾವನಪ್ಪಿದ್ದರು. ಕುಟುಂಬ ಮಂದಿ ಆಕೆಯ ಅಂತ್ಯಕ್ರಿಯೆಯನ್ನು ಕೂಡಾ ನಡೆಸಿದ್ದು, ಆಕೆಯ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಹರಿಯಬಿಟ್ಟಿದ್ದರು ಎನ್ನಲಾಗಿದೆ.
ಆದರೆ ಕಳೆದ ಶುಕ್ರವಾರ ಆಕೆ ಏಕಾಏಕಿ ಪ್ರತ್ಯಕ್ಷವಾಗಿದ್ದು ಕುಟುಂಬ ಹಾಗೂ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಹಾವು ಕಡಿತದಿಂದ ತಾನು ಸಾವನ್ನಪ್ಪಿಲ್ಲವೆಂದು, ಕೇವಲ ಮೂರ್ಛೆಹೊಂದಿದದ್ದು, ದೋಣಿಯವರು ತನ್ನನ್ನು ರಕ್ಷಿಸಿರುವುದಾಗಿ,, ಪಕ್ಕದ ಗ್ರಾಮದ ದೇವಾಸ್ಥಾನದಲ್ಲಿ ಬಿಟ್ಟಿರುವುದಾಗಿಯೂ ಆಕೆಯು ಹೇಳಿಕೊಂಡಿದ್ದಾಳೆ.
ಆಕೆಯ ಇಬ್ಬರು ಪುತ್ರಿಯರು -ರಾಮ್ ಕುಮಾರಿ ಹಾಗೂ ಮುನ್ನಿ- ತಮ್ಮ ತಾಯಿಯನ್ನು ಆಖೆಯ ದೇಹದಲ್ಲಿದ್ದ ಗುರುತು-ಚಿಹ್ನೆಯಿಂದ ಗುರುತಿಸಿದ್ದಾರೆ.
ಚಿತ್ರಕೃಪೆ: ಟೈಮ್ಸ್ ಆಫ್ ಇಂಡಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.