ಹಗರಣದ ಕೂಪವಾಗಿರುವ 108 ಸೇವೆ : ಬಟಾಬಯಲು ಮಾಡಿದ ಸುವರ್ಣ ನ್ಯೂಸ್

Published : Dec 23, 2016, 05:44 PM ISTUpdated : Apr 11, 2018, 12:42 PM IST
ಹಗರಣದ ಕೂಪವಾಗಿರುವ 108 ಸೇವೆ : ಬಟಾಬಯಲು ಮಾಡಿದ ಸುವರ್ಣ ನ್ಯೂಸ್

ಸಾರಾಂಶ

ರೋಗಿಗಳನ್ನ ಎರಡಲ್ಲಾ ಮೂರಲ್ಲಾ ಐದೈದು ಆಂಬುಲೆನ್ಸ್ ಬದಲಾಯಿಸಿ ಕರ್ಕೋಂಡು ಹೋಗಿ ಯಾವ ರೀತಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಾರೆ ಅನ್ನೋದನ್ನ ನಮ್ಮ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದೆವು.

ಸರ್ಕಾರಿ ಆಂಬುಲೆನ್ಸ್ ಸೇವೆ 108ರ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಅದರ ಕಾರ್ಯದ ಬಗ್ಗೆ ಗೌರವ ಇದೆ. ಆದರೆ ಈ ಹೆಮ್ಮೆ ಗೌರವಕ್ಕೆ ಧಕ್ಕೆ ತರುವಂಥಾ ಬೆಳವಣಿಗೆಯೊಂದು ಇಲ್ಲಿ ನಡೀತಿದೆ. ಈ 108 ಸೇವೆ ಹಗರಣದ ಕೂಪ ಆಗಿರೋದನ್ನ ನಮ್ಮ ಕವರ್ ಸ್ಟೋರಿ ತಂಡ ಬಟಾಬಯಲು ಮಾಡಿದೆ.

108 ಸರ್ಕಾರಿ ಆಂಬುಲೆನ್ಸ್ ಅದೆಷ್ಟೋ ಜನರಿಗೆ ಪ್ರಾಣ ದಾನ ಮಾಡಿದ ಸಂಜೀವಿನಿ. ಆದರೆ ಇಂಥಾ ಪವಿತ್ರ ಸೇವೆಯನ್ನು ಆಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತ ಜಿವಿಕೆ ಅನ್ನೋ ಖಾಸಗಿ ಸಂಸ್ಥೆ ಅಪವಿತ್ರಗೊಳಿಸುತ್ತಿದೆ. ಹಣಗಳಿಸೋ ದುರುದ್ದೇಶದಿಂದ ಮಾಡಬಾರದ ಕೆಲಸ ಮಾಡುತ್ತಿದೆ.

ಹೌದು ಇವರ ದೂರಿಗೆ ಪೂರಕವಾದ ಸಾಕ್ಷಿಗಳು ಬೇಕಲ್ವೆ. ಅದಕ್ಕಾಗಿ ನಮ್ಮ ಆಪರೇಷನ್ 108ನ್ನ ಪ್ರಾರಂಭಿಸಿದ್ದೆವು. ನಮ್ಮ ಆಪರೇಷನ್ನಲ್ಲಿ ಸರ್ಕಾರದ 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯ ಹೊಣೆ ಹೊತ್ತ ಜಿವಿಕೆ ಸಂಸ್ಥೆ ಯಾವ ರೀತಿ ಹಣಕ್ಕಾಗಿ ತನ್ನ ಅಧಿಕಾರ ದುರ್ಬಳಕೆ ಮಾಡುತ್ತಿದೆ ಅನ್ನೋ ಬಯಲಾಯ್ತು.

ರೋಗಿಗಳನ್ನ ಎರಡಲ್ಲಾ ಮೂರಲ್ಲಾ ಐದೈದು ಆಂಬುಲೆನ್ಸ್ ಬದಲಾಯಿಸಿ ಕರ್ಕೋಂಡು ಹೋಗಿ ಯಾವ ರೀತಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಾರೆ ಅನ್ನೋದನ್ನ ನಮ್ಮ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದೆವು. ಇಷ್ಟೇ ಅಲ್ಲ ಇವರು ಆಂಬುಲೆನ್ಸ್ ನಿರ್ವಹಣೆಯನ್ನೂ ಸರಿ ಮಾಡದೆ ಭಾರೀ ಮೋಸ ಮಾಡುತ್ತಿದ್ದಾರೆ. ಇದು ನಮ್ಮ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು.

ಜೊತೆಗೆ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸಿಬ್ಬಂದಿಗೆ ಯಾವ ಸೌಲಭ್ಯವನ್ನೂ ಒದಗಿಸದೆ, ಅವರನ್ನ ನಿರಂತರವಾಗಿ ಶೋಷಿಸುತ್ತಿದೆ. ಜಿವಿಕೆ ಸಂಸ್ಥೆ ಇಷ್ಟೆಲ್ಲಾ ಕರ್ಮಕಾಂಡ ಮಾಡಿದ್ದರೂ ಆರೋಗ್ಯ ಸಚಿವರು ಇವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಹಲವು ಅನುಮಾನ ಸೃಷ್ಟಿಸಿದೆ.

ವರದಿ: ರಂಜಿತ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!