ಇಬ್ಬರು ಪುತ್ರಿಯರಿದ್ರೂ 3ನೇ ಮದುವೆಗೆ ಮುಂದಾಗಿದ್ದ ಭೂಪ

Published : Jun 20, 2018, 08:39 PM ISTUpdated : Jun 20, 2018, 08:41 PM IST
ಇಬ್ಬರು ಪುತ್ರಿಯರಿದ್ರೂ 3ನೇ ಮದುವೆಗೆ ಮುಂದಾಗಿದ್ದ ಭೂಪ

ಸಾರಾಂಶ

ತಲಾಖ್ ಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿಯಮಗಳನ್ನು ಹೇಳಿದ್ದರೂ ಯಾವುದೂ ಸಮರ್ಪಕ ಜಾರಿಯಾದಂತೆ ತೋರುತ್ತಿಲ್ಲ. ಹೌದು ಎಂಬಂತೆ ಉಡುಪಿ ಸಮೀಪದಲ್ಲಿ ನಡೆದ ಘಟನೆ ಮತ್ತಷ್ಟು ಪುಷ್ಠಿ ನೀಡುತ್ತದೆ.  

ಉಡುಪಿ[ಜೂ.20]  ತಲಾಖ್ ಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿಯಮಗಳನ್ನು ಹೇಳಿದ್ದರೂ ಯಾವುದೂ ಸಮರ್ಪಕ ಜಾರಿಯಾದಂತೆ ತೋರುತ್ತಿಲ್ಲ. ಹೌದು ಎಂಬಂತೆ ಉಡುಪಿ ಸಮೀಪದಲ್ಲಿ ನಡೆದ ಘಟನೆ ಮತ್ತಷ್ಟು ಪುಷ್ಠಿ ನೀಡುತ್ತದೆ.

ಈಗಾಗಲೇ ಎರಡು ಮದುವೆಯಾದ ಭೂಪ ಮೂರನೇ ಮದುವೆಗೆ ಮುಂದಾಗಿದ್ದಾನೆ. ಹಾಗಾಗಿ ಪತ್ನಿಗೆ ತಲಾಕ್ ನೀಡುವಂತೆ ಒತ್ತಾಯಿಸಿ ಥಳಿಸಿದ್ದಾನೆ. ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಎಂಬಲ್ಲಿನ ನಿವಾಸಿ ಸೈಯ್ಯದ್ ಪ್ರಕರಣದ ಆರೋಪಿ. ಅಷ್ಟೆ ಅಲ್ಲ ತಲಾಖ್ ಗೆ ಒತ್ತಾಯಿಸಿ ಪತ್ನಿಗೆ ಹಲ್ಲೆಯನ್ನೂ ನಡೆಸಿದ್ದಾನೆ. ಗಂಡನ ದೌರ್ಜನ್ಯದಿಂದ ನರಳಿದ ಮಹಿಳೆ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸಂತ್ರಸ್ತೆಗೆ 10 ವರ್ಷದ ಹಿಂದೆ ಸೈಯ್ಯದ್ ಜಿತೆ ಮದುವೆಯಾಗಿತ್ತು.ಈಗಾಗಲೇ ಎರಡು ಮದುವೆಯಾಗಿರುವ ಸಯ್ಯದ್ ತಲಾಖ್ ಕೊಟ್ಟು ಮೂರನೇ ಮದುವೆಗೆ ಮುಂದಾಗಿದ್ದಾನೆ.ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.ನಾಲ್ಕೈದು ದಿನಗಳಿಂದ ಪತ್ನಿಗೆ ವಿಪರೀತ ಹಿಂಸೆ ನೀಡುತ್ತಿದ್ದು ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಸದ್ಯ ಕುಂದಾಪುರ ಪೊಲೀಸರಿಗೆ ಪತ್ನಿಯಿಂದ ದೂರು ನೀಡಿದ್ದು, ನೊಂದ ಮಹಿಳೆಗೆ ಸಾಂತ್ವಾನ ಕೇಂದ್ರ ನೆರವು ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ