
ಬೀಜಿಂಗ್(ಜೂ.20): ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಯ ಹೇಳಿಕೆಯಿಂದ ಸ್ವತಃ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ.
ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ತ್ರಿಪಕ್ಷೀಯ ಸಹಕಾರದ ಕುರಿತು ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಚೀನಾ ಅಂತರ ಕಾಯ್ದುಕೊಂಡಿದ್ದರೂ ಭಾರತ-ಪಾಕಿಸ್ತಾನದ ನಡುವೆ ಮಾತುಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ, ಇದರಿಂದಾಗಿ ಉಭಯ ರಾಷ್ಟ್ರಗಳ ಹಿತಾಸಕ್ತಿಗಳೂ ಸುಧಾರಣೆಯಾಗಲಿವೆ ಎಂದು ಹೇಳಿದೆ.
ಭಾರತ-ಪಾಕಿಸ್ತಾನದ ನಡುವೆ ಶಾಂತಿ ಮೂಡಿಸಲು ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಅಗತ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿ ಜೂ.18 ರಂದು ಹೇಳಿದ್ದರು.
ಭಾರತ, ಪಾಕಿಸ್ತಾನ ಎರಡೂ ಚೀನಾದ ಮಿತ್ರ ರಾಷ್ಟ್ರಗಳು, ಮಿತ್ರರಾಷ್ಟ್ರಗಳ ನಡುವೆ ಉತ್ತಮ, ಸೌಹಾರ್ದಯುತ ವಾತಾವರಣವನ್ನುಂಟುಮಾಡಲು ಚೀನಾ ಬಯಸುತ್ತಿದೆ, ಈ ಮೂಲಕ ಪ್ರಾದೇಶಿಕವಾಗಿ ಸ್ಥಿರತೆ ಸಾಧ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.