ಹೆಲಿಕಾಪ್ಟರ್​ನಿಂದ ಹಾರುವ ಮುನ್ನ ಖಳನಟ ಉದಯ್ ಕೊನೆಯದಾಗಿ ಸುವರ್ಣ ನ್ಯೂಸ್'ಗೆ ಹೇಳಿದ್ದು...!

Published : Nov 07, 2016, 11:01 AM ISTUpdated : Apr 11, 2018, 01:07 PM IST
ಹೆಲಿಕಾಪ್ಟರ್​ನಿಂದ ಹಾರುವ ಮುನ್ನ ಖಳನಟ ಉದಯ್ ಕೊನೆಯದಾಗಿ ಸುವರ್ಣ ನ್ಯೂಸ್'ಗೆ ಹೇಳಿದ್ದು...!

ಸಾರಾಂಶ

ಈ ಶೂಟಿಂಗ್'ಗೆ ಹೊರಡುವ ಮುನ್ನ ಉದಯ್ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ್ದು, ದೇವರ ಮೇಲೆ ಭಾರ ಹಾಕಿ ಈ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು(ನ.07): ಒಂದು ಪ್ಲೋರ್ ಮೇಲಿನಿಂದ ಕೆಳಗೆ ಬಗ್ಗಿ ನೋಡಿದರೆ ನನಗೆ ತಲೆ ಸುತ್ತವಂತೆ ಆಗುತ್ತದೆ ಎನ್ನುವ ಖಳನಟ ಉದಯ್ ಇಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ ಜಲಾಶಯಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. 

ಈ ಶೂಟಿಂಗ್'ಗೆ ಹೊರಡುವ ಮುನ್ನ ಉದಯ್ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ್ದು, ದೇವರ ಮೇಲೆ ಭಾರ ಹಾಕಿ ಈ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. 

ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ, ಹೆಲಿಕಾಪ್ಟರ್​ ಹತ್ತುತ್ತಿರುವುದು ಇದೇ ಮೊದಲು ಎಂದು ಮಾತನಾಡಿದ ಉದಯ್, ದೇವರ ಮೇಲೆ ಭಾರ ಹಾಕಿ ಕೆಳಗೆ ಹಾರುತ್ತೇನೆ ಎಂದಿದ್ದಾರೆ, 


ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ  100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನಾಯಕ ನಟ ದುನಿಯಾ ವಿಜಯ್ ಹಾಗೂ ಸಹ ನಟ ಅನಿಲ್'ನಿಂದಿಗೆ ಉದಯ್ ಹಾರಿದ್ದರು, ದುನಿಯಾ ವಿಜಯ್ ಈಜಿ ದಡ ಸೇರಿದರೆ ಉದಯ್​, ಅನಿಲ್ ಸಾವನ್ನಪ್ಪಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!