ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಿದ ಕೇಂದ್ರ ಸರಕಾರ

Published : Jan 17, 2017, 03:39 PM ISTUpdated : Apr 11, 2018, 01:00 PM IST
ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಿದ ಕೇಂದ್ರ ಸರಕಾರ

ಸಾರಾಂಶ

ರಾಜ್'ಕುಮಾರ್ ದೇವಾಂಗನ್ ಮತ್ತು ಮಯಂಕ್ ಶೀಲ್ ಚೌಹಾಣ್ ಅವರಿಗೆ ಮೂರು ತಿಂಗಳು ಸಂಬಳ ಕೊಟ್ಟು ತತ್'ಕ್ಷಣದಿಂದಲೇ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ.

ನವದೆಹಲಿ(ಜ. 17): ಸರಿಯಾಗಿ ಜವಾಬ್ದಾರಿ ನಿಭಾಯಿಸಲು ವಿಫಲರಾದ ಕಾರಣವೊಡ್ಡಿ ಕೇಂದ್ರ ಸರಕಾರವು ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. 1992ರ ಛತ್ತೀಸ್'ಗಢ ಕೆಡರ್ ಬ್ಯಾಚ್'ನ ರಾಜಕುಮಾರ್ ದೇವಾಂಗನ್ ಹಾಗೂ 1998ರ ಎಜಿಎಂಯು ಕೆಡರ್ ಬ್ಯಾಚ್'ನ ಮಯಂಕ್ ಶೀಲ್ ಚೌಹಾಣ್ ಅವರನ್ನು ಸೇವೆಯಿಂದ ವಿಮುಕ್ತಗೊಳಿಸಲಾಗಿದೆ. ಆಯಾ ರಾಜ್ಯದ ಕೆಡರ್ ಮಾಡಿದ ಶಿಫಾರಸಿನ ಆಧಾರದ ಮೇಲೆ ಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ. ಕಳೆದ 15 ವರ್ಷಗಳಲ್ಲಿ ಇಂತಹ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಿದ ಪ್ರಕರಣ ನಡೆದಿರುವುದು ಇದೇ ಮೊದಲೆನ್ನಲಾಗಿದೆ.

ರಾಜ್'ಕುಮಾರ್ ದೇವಾಂಗನ್ ಮತ್ತು ಮಯಂಕ್ ಶೀಲ್ ಚೌಹಾಣ್ ಅವರಿಗೆ ಮೂರು ತಿಂಗಳು ಸಂಬಳ ಕೊಟ್ಟು ತತ್'ಕ್ಷಣದಿಂದಲೇ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ. ಇವರಿಗೆ ಮಾಮೂಲಿ ರೀತಿಯ ನಿವೃತ್ತಿ ಸೌಲಭ್ಯಗಳೆಲ್ಲವೂ ದೊರಕುತ್ತವೆ.

ಇತ್ತೀಚೆಗೆ, ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಅಸಮರ್ಪಕರ ಕಾರ್ಯನಿರ್ವಹಣೆಯ ಕಾರಣವೊಡ್ಡಿ ಇದೇ ರೀತಿ ಕಡ್ಡಾಯ ನಿವೃತ್ತಿ ಕೊಟ್ಟು ಮನೆಗೆ ಕಳುಹಿಸಲಾಗಿತ್ತು.

ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಡುವ ಅಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಇದೆ. ಅಧಿಕಾರಿಯು 15 ವರ್ಷ ಅಥವಾ 25 ವರ್ಷ ಸೇವಾವಧಿ ಹಂತ ತಲುಪಿದಾಗ; ಅಥವಾ ಅಧಿಕಾರಿ ವಯಸ್ಸು 50 ವರ್ಷವಾದಾಗ ಅವರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸಬಹುದಾಗಿದೆ. ರಾಜ್ಯ ಸರಕಾರದ ಸಲಹೆಯ ಆಧಾರದ ಮೇಲೆ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ