ರೈಸಿನಾ ಸಂವಾದ: ‘ಭಯೋತ್ಪಾದನೆಯಿಂದ ದೂರವಿರಿ’ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಕರೆ

Published : Jan 17, 2017, 02:27 PM ISTUpdated : Apr 11, 2018, 12:59 PM IST
ರೈಸಿನಾ ಸಂವಾದ: ‘ಭಯೋತ್ಪಾದನೆಯಿಂದ ದೂರವಿರಿ’ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಕರೆ

ಸಾರಾಂಶ

ರೈಸಿನಾ ಸಂವಾದದಲ್ಲಿ ಮಾತನಾಡುತ್ತಾ, ನಾನು ಲಾಹೋರ್’ಗೆ ಪ್ರಯಾಣಿಸಿದೆ; ಆದರೆ ಕೇವಲ ಭಾರತವೊಂದೇ ಶಾಂತಿಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನವು ಭಯೋತ್ಪಾದನೆ ಮಾರ್ಗವನ್ನು ಬಿಟ್ಟುಬಿಡಬೇಕು, ಎಂದು ಪಾಕಿಸ್ತಾನಕ್ಕೆ ಕರೆ ಕೊಟ್ಟಿದ್ದಾರೆ.

ನವದೆಹಲಿ (ಜ.17): ಭಯೋತ್ಪಾದನೆ ದಾರಿಯನ್ನು ಬಿಟ್ಟು ಶಾಂತಿಯ ಮಾರ್ಗದಲ್ಲಿ ನಡೆಯುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಆಗ್ರಹಿಸಿದ್ದಾರೆ.

ರೈಸಿನಾ ಸಂವಾದದಲ್ಲಿ ಮಾತನಾಡುತ್ತಾ, ನಾನು ಲಾಹೋರ್’ಗೆ ಪ್ರಯಾಣಿಸಿದೆ; ಆದರೆ ಕೇವಲ ಭಾರತವೊಂದೇ ಶಾಂತಿಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನವು ಭಯೋತ್ಪಾದನೆಯಿಂದ ದೂರವಿರಬೇಕು, ಎಂದು ಪಾಕಿಸ್ತಾನಕ್ಕೆ ಕರೆ ಕೊಟ್ಟಿದ್ದಾರೆ.

ನೆರೆಕರೆಯ ಬಗ್ಗೆ ನಾನು ಹೊಂದಿರುವ ದೂರದೃಷ್ಟಿಯು, ನನ್ನ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ದೇಶಗಳನ್ನು ಆಹ್ವಾನಿಸುವಂತೆ ಮಾಡಿದೆ, ಎಂದು ಮೋದಿ ಹೇಳಿದ್ದಾರೆ.

ಭಾರತದಲ್ಲಿರುವ ಹಾಗೂ ಹೊರದೇಶಗಳಲ್ಲಿರುವ ಎಲ್ಲಾ ಭಾರತೀಯರ ಶ್ರೇಯೋಭಿವೃದ್ಧಿ ತಮ್ಮ ಸರ್ಕಾರಕ್ಕೆ ಬಹಳ ಮಹತ್ವದ ವಿಷಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ 2ನೇ ರೈಸಿನಾ ಸಂವಾದದಲ್ಲಿ, 65 ದೇಶಗಳಿಂದ 250ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖ್ಯಾತ ನಟ, ಎಂಪಿ, ಕೋಟಿ ಕೋಟಿ ಇದ್ರೂ, ತಳ್ಳೋ ಗಾಡೀಲಿ ಊಟ ಸವಿದ ಜಗ್ಗೇಶ್!
ಯಶ್ ಸೋಲಿಸ್ತಾರಾ ರಣವೀರ್.. ಬ್ಲಾಕ್ ಬಸ್ಟರ್ 'KGF 2' ಬೀಟ್ ಮಾಡಲಿದ್ಯಾ ರಣವೀರ್ "ಧುರಂಧರ್..?