108 ಸಿಬ್ಬಂದಿಯ ಧನದಾಹಕ್ಕೆ ಬಾಲಕ ಬಲಿ: ಲಂಚಕ್ಕೆ ಬೇಡಿಕೆಯಿಟ್ಟು ತಡವಾಗಿ ಬಂದ ಸಿಬ್ಬಂದಿ

Published : Jul 19, 2017, 08:26 AM ISTUpdated : Apr 11, 2018, 12:41 PM IST
108 ಸಿಬ್ಬಂದಿಯ ಧನದಾಹಕ್ಕೆ ಬಾಲಕ ಬಲಿ: ಲಂಚಕ್ಕೆ ಬೇಡಿಕೆಯಿಟ್ಟು ತಡವಾಗಿ ಬಂದ ಸಿಬ್ಬಂದಿ

ಸಾರಾಂಶ

ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದ್ರೆ ಆತ ಲಂಚಕ್ಕೆ ಬೇಡಿಕೆಯಿಟ್ಟು, 2 ಗಂಟೆ ತಡವಾಗಿ ಬಂದಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ರಾಜ್ಯದ್ಯಂತ ಡೆಂಘೀ ನರ್ತನ ಮುಂದುವರೆದಿದೆ.

ತುಮಕೂರು(ಜು.19): ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದ್ರೆ ಆತ ಲಂಚಕ್ಕೆ ಬೇಡಿಕೆಯಿಟ್ಟು, 2 ಗಂಟೆ ತಡವಾಗಿ ಬಂದಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ರಾಜ್ಯದ್ಯಂತ ಡೆಂಘೀ ನರ್ತನ ಮುಂದುವರೆದಿದೆ.

ಡೆಂಘೀ ರೋಗಕ್ಕೆ  ಸರಿಯಾದ ಚಿಕಿತ್ಸೆ ಸಿಗ್ತಿಲ್ಲ ಅನ್ನೋ ಆರೋಪ ಒಂದೆಡೆಯಾದರೆ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಲಂಚಬಾಕತನ ಮತ್ತೊಂದೆಡೆ. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರಲ್ಲಿ  108 ಸಿಬ್ಬಂದಿಯ ಲಂಚಬಾಕತನಕ್ಕೆ ಬಾಲಕ ಶ್ರೀನಿಧಿ ಬಲಿಯಾಗಿದ್ದಾನೆ.

ಡೆಂಘಿಯಿಂದ ಬಳಲುತ್ತಿದ್ದ  ಬಾಲಕ ಶ್ರೀನಿಧಿಯನ್ನು ಪಾವಗಡ ಆಸ್ಪತ್ರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲು 108 ಸಿಬ್ಬಂದಿ  ಲಂಚ ಬೇಡಿಕೆ ಇಟ್ಟಿದ್ದಾರೆ. ಪರಿಣಾಮ 2 ಗಂಟೆ ತಡವಾಗಿ ಬಂದು ಬಾಲಕನನ್ನು ಸಾಗಿಸುವಾಗ ದಾರಿ ಮಧ್ಯೆ ಬಾಲಕ ಶ್ರೀನಿಧಿ ಪ್ರಾಣಬಿಟ್ಟಿದ್ದಾನೆ. ಇತ್ತ ಮಂಡ್ಯದಲ್ಲೂ ಮಹಾಮಾರಿ ಡೆಂಘೀ ಬಾಲಕನೋರ್ವನನ್ನು ಬಲಿ ತೆಗೆದುಕೊಂಡಿದೆ. ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದ ಹೇಮಂತ್  ತೀವ್ರ ಜ್ವರಕ್ಕೆ ಬಲಿಯಾಗಿದ್ದಾನೆ.

ಇತ್ತ ಹುಬ್ಬಳ್ಳಿಯಲ್ಲೂ  ಸುಮಾರು 35 ಮಂದಿಗೆ ಡೆಂಘೀ ರೋಗ ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೇ ಡೆಂಘೀ ತೀವ್ರವಾಗ್ತಿರೋದನ್ನ ಗಮನಿಸಿದ ಜಿಲ್ಲಾ ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನಕ್ಕೆ ಹುಬ್ಬಳ್ಳಿ ಯುವಕರು, ಕೈ ಜೋಡಿಸಿದ್ದು  ಡೆಂಘೀ ಅರಿವು ಕಾರ್ಯಕ್ರಮ ಬರದಿಂದ ಸಾಗಿದೆ. ಜತೆಗೆ ಆರೋಗ್ಯ ಇಲಾಖೆಯಿಂದ ಪ್ರತಿ ಮನೆಗೂ ಪಿನಾಯಿಲ್ ವಿತರಣೆ ಮಾಡಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ