ಅನೈತಿಕ ಚಟುವಟಿಕೆ ಪ್ರಶ್ನಿಸಿದ್ದಕ್ಕೆ ರಕ್ತ ಬರುವಂತೆ ಹೊಡೆದ ಮಂಗಳಮುಖಿಯರು!

Published : Dec 07, 2016, 06:50 AM ISTUpdated : Apr 11, 2018, 01:09 PM IST
ಅನೈತಿಕ ಚಟುವಟಿಕೆ ಪ್ರಶ್ನಿಸಿದ್ದಕ್ಕೆ ರಕ್ತ ಬರುವಂತೆ ಹೊಡೆದ ಮಂಗಳಮುಖಿಯರು!

ಸಾರಾಂಶ

ನಗರದಲ್ಲಿ ಮಂಗಳಮುಖಿಯರ ಅನೈತಿಕ ಚಟುವಟಿಕೆ, ಪುಂಡಾಟ ಮುಂದುವರಿದಿದೆ. ಕಳೆದ ಯುವಕನೋರ್ವನ ಮೇಲೆ ಮಂಗಳಮುಖಿಯರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬ್ಯಾಟರಾಯನಪುರದ ಟೋಟಲ್ ಗ್ಯಾಸ್ ಬಂಕ್ ಮುಂದೆ ನಡೆದಿದೆ.

ಬೆಂಗಳೂರು(ಡಿ.07): ನಗರದಲ್ಲಿ ಮಂಗಳಮುಖಿಯರ ಅನೈತಿಕ ಚಟುವಟಿಕೆ, ಪುಂಡಾಟ ಮುಂದುವರಿದಿದೆ. ಕಳೆದ ಯುವಕನೋರ್ವನ ಮೇಲೆ ಮಂಗಳಮುಖಿಯರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬ್ಯಾಟರಾಯನಪುರದ ಟೋಟಲ್ ಗ್ಯಾಸ್ ಬಂಕ್ ಮುಂದೆ ನಡೆದಿದೆ.

ರಸ್ತೆ ಬದಿಯಲ್ಲಿ ಕೈಗೆ ಸಿಕ್ಕ ಕಲ್ಲುಗಳಿಂದ ಮೂವರು ಮಂಗಳಮುಖಿಯರ ಗುಂಪು ಯುವಕನ ತಲೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. 31 ವರ್ಷ ವಯಸ್ಸಿನ ಸ್ವಾಮಿ, ಗಂಭೀರವಾಗಿ ಗಾಯಗೊಂಡಿರುವ ಯುವಕ. ಬ್ಯಾಟರಾಯನಪುರದಲ್ಲಿ ಮರಳು ಮಾರಾಟಕ್ಕೆ ಬಂದು ನಿಲ್ಲುವ ಲಾರಿ ನಿರ್ವಾಹಕನಾಗಿರುವ ಸ್ವಾಮಿ, ಅನೈತಿಕ ಚಟುವಟಿಕೆಗಳನ್ನು ಪ್ರಶ್ನಿಸಿದ್ದಾನೆ.

ಇದರಿಂದದ ಕೆರಳಿದ ತೃತೀಯ ಲಿಂಗಿಗಳು ಸ್ವಾಮಿ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ರಿಗು ಸುದ್ದಿ ಮುಟ್ಟಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸರು, ಇಬ್ಬರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

₹1.50 ಲಕ್ಷದತ್ತ ಚಿನ್ನದರ ನಾಗಾಲೋಟ!
ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ