ವಾಹನ ಸವಾರರೇ ಗಮನಿಸಿ! ನಾಳೆ ಪೆಟ್ರೋಲ್ ಸಿಗೋದು ಕಷ್ಟ

Published : Jan 27, 2018, 01:06 PM ISTUpdated : Apr 11, 2018, 01:01 PM IST
ವಾಹನ ಸವಾರರೇ ಗಮನಿಸಿ! ನಾಳೆ  ಪೆಟ್ರೋಲ್ ಸಿಗೋದು ಕಷ್ಟ

ಸಾರಾಂಶ

ವಾಹನ ಸವಾರರೇ ಗಮನಿಸಿ ನಾಳೆ  ಪೆಟ್ರೋಲ್ ಸಿಗೋದು ಕಷ್ಟ. ಬೆಂಗಳೂರು ಸೇರಿ ಹಲವೆಡೆ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು (ಜ.27): ವಾಹನ ಸವಾರರೇ ಗಮನಿಸಿ ನಾಳೆ  ಪೆಟ್ರೋಲ್ ಸಿಗೋದು ಕಷ್ಟ. ಬೆಂಗಳೂರು ಸೇರಿ ಹಲವೆಡೆ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೊಸಕೋಟೆ ಬಳಿ ರಸ್ತೆಯಲ್ಲಿ ಗುಂಡಿಗಳಿಗೆ ಬೇಸತ್ತಿರುವ ಲಾರಿ ಚಾಲಕರು ಸುಮಾರು 2 ಸಾವಿರ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಹೊಸಕೋಟೆಯ ದೇವನಗುಂದಿಯಲ್ಲಿ ಚಾಲಕರು ಧರಣಿ ಪ್ರಾರಂಭಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಟ್ಯಾಂಕರ್ಸ್ ಸ್ಥಗಿತವಾಗಿದೆ.  ಬೆಂಗಳೂರು ನಗರ, ಕೋಲಾರ,  ತುಮಕೂರು, ಚಿಕ್ಕಬಳ್ಳಾಪುರಕ್ಕೆ ಪೆಟ್ರೋಲ್  ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ದೇವನಗುಂದಿಯಲ್ಲಿ  10 ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಮಾಲೂರು ಕ್ರಾಸ್ -ದೇವನಗುಂದಿ IOC ಟರ್ಮಿನಲ್'ವರೆಗೂ ರಸ್ತೆ ಗುಂಡಿಗಳಿಂದಾಗಿ ತಿಂಗಳಿನಿಂದ ಪದೇ ಪದೇ ಲಾರಿ ಅಪಘಾತ ಸಂಭವಿಸುತ್ತಿದೆ.  ಬೇಸತ್ತ ವಾಹನ ಚಾಲಕರು ಈಗ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ
ಶಾಮನೂರು ಶಿವಶಂಕರಪ್ಪ ನಿಧನ: ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!