'ಬಿಎಸ್'ವೈ-ಶೋಭಾ ಕರಂದ್ಲಾಜೆ ಮದುವೆಯಾಗಿರೋ ಸಿಡಿ ನನ್ನ ಬಳಿಯಿದೆ; ಸಿಎಂ ಭದ್ರತೆ ಕೊಟ್ಟರೆ ಬಿಡುಗಡೆ ಮಾಡ್ತೀನಿ'

By Suvarna Web DeskFirst Published Jan 27, 2018, 12:44 PM IST
Highlights

ಶೋಭಾ ಕರಂದ್ಲಾಜೆಯಿಂದ ಬೆದರಿಕೆ ಇದೆ ಎಂದು ಕೆಜಿಪಿ ಸಂಸ್ಥಾಪಕ ಪದ್ಮನಾಭ ಮಾದ್ಯಮಗಳೆದುರು ಕಣ್ಣೀರಿಟ್ಟಿದ್ದಾರೆ.  

ಬಾಗಲಕೋಟೆ (ಜ.27): ಶೋಭಾ ಕರಂದ್ಲಾಜೆಯಿಂದ ಬೆದರಿಕೆ ಇದೆ ಎಂದು ಕೆಜಿಪಿ ಸಂಸ್ಥಾಪಕ ಪದ್ಮನಾಭ ಮಾದ್ಯಮಗಳೆದುರು ಕಣ್ಣೀರಿಟ್ಟಿದ್ದಾರೆ.  

ಯಡಿಯೂರಪ್ಪ ಒಳ್ಳೆಯವರೇ. ಆದರೆ ಕಿಂಗ್'ಪಿನ್ ಶೋಭಾ ಅವರಿಂದ ತೊಂದರೆಯಾಗಿದೆ.  ಈ ಬಗ್ಗೆ ಕೇಸ್ ಮಾಡಿದರೂ ಯಾರೂ ಕೇಳುತ್ತಿಲ್ಲ. ನನ್ನ ಮೇಲೆ ಹಲ್ಲೆ ನಡೆದಿವೆ. ಈಗಲೂ ಹಲ್ಲೆ ನಡೆದರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಸಿಡಿ ಬಿಡುಗಡೆ ವಿಚಾರದಲ್ಲಿ ನನಗೆ ಭದ್ರತೆ ಇಲ್ಲ. ಸಿಡಿಯಲ್ಲಿ ಯಡಿಯೂರಪ್ಪ ಮತ್ತು ಶೋಭಾ ಮದುವೆಯಾಗಿರೋ ವಿಡಿಯೋ ಇದೆ. ಸಿಎಂ ಭದ್ರತೆ ನೀಡುವುದಾದರೆ ಸಿಡಿ ಬಿಡುಗಡೆ ಮಾಡುತ್ತೇನೆ.  ಕೆಲವು ವೇಳೆ ನನ್ನನ್ನು ಬಳಸಿಕೊಂಡು ಬಿಸಾಡಿದ್ದಾರೆ.

ನಾನು ಕತ್ತಲಲ್ಲಿದ್ದೇನೆ. ನನ್ನ ನೋವು ಕೇಳೋರಿಲ್ಲ. ನಾನು ಯಾರಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ. ಶೋಭಾ ಕರಂದ್ಲಾಜೆಯಿಂದ ನನಗೆ ಬೆದರಿಕೆ ಎಂದು ಪದ್ಮನಾಭ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

click me!