
ಚೆನ್ನೈ: ಪೊಲೀಸ್ ಪೇದೆಯೋರ್ವ ತನಗೆ ಮಹಿಳೆ ಹೆಸರಲ್ಲಿ ಫೇಸ್’ಬುಕ್’ನಲ್ಲಿ ವಂಚಿಸಿದ 22 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಫೇಸ್’ಬುಕ್’ನಲ್ಲಿ ಮಹಿಳೆಯ ಹೆಸರಿನಲ್ಲಿ ಅಕೌಂಟ್ ತೆರೆದ ವ್ಯಕ್ತಿಯಿಂದ ತಮಿಳುನಾಡಿನ ವಿರುಡುನಗರದ ನಿವಾಸಿಯಾದ ಪೇದೆ ಕಣ್ಣನ್ ಕುಮಾರ್ ಮೋಸಹೋಗಿದ್ದ.
ಎಸ್ ಅಯ್ಯನರ್ ಎನ್ನುವ ವಿದ್ಯಾರ್ಥಿ ಮಹಿಳೆ ಹೆಸರಲ್ಲಿ ನಕಲಿ ಖಾತೆ ತೆರೆದು ಪೇದೆಗೆ ನಂಬಿಸಿದ್ದ. ಇದಾದ ಕೆಲ ದಿನಗಳ ಬಳಿಕ ತಾನು ಮೋಸಹೋಗಿರುವ ಬಗ್ಗೆ ತಿಳಿದ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಅಲ್ಲದೇ ಮಾನಸಿಕ ಖಿನ್ನತೆಗೂ ಕೂಡ ಒಳಗಾಗಿದ್ದ.
ಬಳಿಕ ತನ್ನ ಗೆಳೆಯನೊಂದಿಗೆ ಸೇರಿ ಅಯ್ಯನರ್’ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಕೊಲೆ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.