ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕಸರತ್ತು ಇಂದು ಆರಂಭ

Published : Mar 14, 2018, 09:56 AM ISTUpdated : Apr 11, 2018, 12:42 PM IST
ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕಸರತ್ತು ಇಂದು ಆರಂಭ

ಸಾರಾಂಶ

ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆಗೆ ಅಭ್ಯ​ರ್ಥಿ​ಗಳ ಆಯ್ಕೆಗೆ ಕಾಂಗ್ರೆಸ್‌ ಪಕ್ಷದ ಪ್ರಪ್ರ​ಥಮ ಅಧಿ​ಕೃತ ಕಸ​ರತ್ತು ನಗ​ರದ ಹೊರ​ವ​ಲ​ಯದ ರೆಸಾ​ರ್ಟ್‌​ನಲ್ಲಿ ಬುಧ​ವಾರ ನಡೆ​ಯ​ಲಿದೆ.

ಬೆಂಗ​ಳೂರು : ಮುಂಬ​ರುವ ವಿಧಾ​ನ​ಸಭಾ ಚುನಾ​ವಣೆಗೆ ಅಭ್ಯ​ರ್ಥಿ​ಗಳ ಆಯ್ಕೆಗೆ ಕಾಂಗ್ರೆಸ್‌ ಪಕ್ಷದ ಪ್ರಪ್ರ​ಥಮ ಅಧಿ​ಕೃತ ಕಸ​ರತ್ತು ನಗ​ರದ ಹೊರ​ವ​ಲ​ಯದ ರೆಸಾ​ರ್ಟ್‌​ನಲ್ಲಿ ಬುಧ​ವಾರ ನಡೆ​ಯ​ಲಿದೆ.

ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ.ಪ​ರ​ಮೇ​ಶ್ವರ್‌ ಹಾಗೂ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ನೇತೃ​ತ್ವ​ದಲ್ಲಿ ನಡೆ​ಯ​ಲಿ​ರುವ ಈ ಸಭೆ​ಯಲ್ಲಿ ರಾಜ್ಯ ಕಾಂಗ್ರೆ​ಸ್‌ನ ಎಲ್ಲಾ ಪ್ರಮುಖ ನಾಯ​ಕರು ಸೇರಿ​ದಂತೆ ಒಟ್ಟು 43 ಮಂದಿ ಪಾಲ್ಗೊ​ಳ್ಳ​ಲಿ​ದ್ದಾರೆ.

ಮುಂಬ​ರುವ ಚುನಾ​ವ​ಣೆಗೆ ರಾಜ್ಯದ ಎಲ್ಲಾ ವಿಧಾ​ನ​ಸಭಾ ಕ್ಷೇತ್ರ​ಗಳ ಆಕಾಂಕ್ಷಿ​ಗಳು ಸಲ್ಲಿ​ಸಿ​ರುವ ಅರ್ಜಿ​ಗಳ ಪರಿ​ಶೀ​ಲನೆ ಹಾಗೂ ಈ ಕ್ಷೇತ್ರ​ಗಳ ಬಗ್ಗೆ ಕೆಪಿ​ಸಿಸಿ ಹಾಗೂ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಅವರು ಪ್ರತ್ಯೇಕವಾಗಿ ನಡೆ​ಸಿದ ಸರ್ವೇ ಪ್ರಕಾರ ಯಾರಿಗೆ ಟಿಕೆಟ್‌ ನೀಡು​ವುದು ಸೂಕ್ತ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆ​ಸ​ಲಿ​ದೆ.

ಮೂಲ​ಗಳ ಪ್ರಕಾರ ನಾಳಿನ ಸಭೆಯ ಅಂತ್ಯದ ವೇಳೆಗೆ ಪ್ರತಿ ವಿಧಾ​ನ​ಸಭಾ ಕ್ಷೇತ್ರದ ಬಗ್ಗೆಯೂ ಸಂಭಾವ್ಯ ಅಭ್ಯ​ರ್ಥಿ​ಗಳ ಪ್ಯಾನಲ್‌ವೊಂದನ್ನು ರಾಜ್ಯ ನಾಯ​ಕತ್ವ ಸಿದ್ಧಪ​ಡಿ​ಸಿ​ಕೊ​ಳ್ಳ​ಲಿದ್ದು, ಅದನ್ನು ಹೈಕ​ಮಾಂಡ್‌ಗೆ ಸಲ್ಲಿ​ಸ​ಲಿ​ದೆ. ಇದರ ಆಧಾ​ರದ ಮೇಲೆ ಕಾಂಗ್ರೆ​ಸ್‌​ ಕೇಂದ್ರ ಸಮಿ​ತಿಯು ಮಾಚ್‌ರ್‍ ಮಾಸಾಂತ್ಯಕ್ಕೆ ಸಭೆ ಸೇರ​ಲಿದ್ದು, ಸುಮಾರು 100ರಿಂದ 150 ಕ್ಷೇತ್ರ​ಗಳಿಗೆ ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಅಖೈರು ಮಾಡ​ಲಿದೆ ಎಂದು ಮೂಲ​ಗಳು ಹೇಳಿ​ವೆ.

ಬುಧ​ವಾ​ರದ ಸಭೆ​ಯಲ್ಲಿ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌, ಮುಖಂಡ​ರಾದ ಮಲ್ಲಿ​ಕಾ​ರ್ಜುನ ಖರ್ಗೆ, ಡಿ.ಕೆ. ಶಿವ​ಕು​ಮಾರ್‌, ಎಸ್‌.​ಆರ್‌. ಪಾಟೀಲ್‌, ದಿನೇಶ್‌ ಗುಂಡೂ​ರಾವ್‌, ಆಸ್ಕರ್‌ ಫರ್ನಾಂಡಿಸ್‌, ಬಿ.ಕೆ. ಹರಿ​ಪ್ರ​ಸಾದ್‌ ಸೇರಿ​ದಂತೆ 43 ಮಂದಿ ಮುಖಂಡರು ಪಾಲ್ಗೊ​ಳ್ಳು​ವ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಷಡ್ಯಂತ್ರ: ಬಯಲಾಯ್ತು 'ಬುರುಡೆ' ಗ್ಯಾಂಗ್ ರಹಸ್ಯ!
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌