
ಮೈಸೂರು(ಜು.30): ಪ್ರಕೃತಿಯಲ್ಲಿ ನಡೆಯುವ ಅನೇಕ ವೈಶಿಷ್ಟ್ಯಗಳು ಕೆಲವೊಂದು ಸಾರಿ ಪವಾಡಗಳನ್ನು ಸೃಷ್ಟಸುತ್ತವೆ, ವಿಜ್ಞಾನ ಮತ್ತು ವೈಜ್ಞಾನಿಕತೆಗೆ ಕೆಲವೊಂದು ವೈಶಿಷ್ಟ್ಯತೆಗಳು ಆಶ್ವರ್ಯವನ್ನ ಸೃಷ್ಟಿಮಾಡುತ್ತವೆ.
ಇಂಥ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರು ತಾಲೂಕಿನ ವರುಣಾ ಕ್ಷೇತ್ರದ ಸಜ್ಜೆ ಹುಂಡಿ ಗ್ರಾಮದ ಜನ.. ರಾಮಯ್ಯ ಹಾಗೂ ಕೆಂಪಯ್ಯ ದಂಪತಿ 2 ವರ್ಷಗಳ ಹಿಂದೆ ಹೆಚ್ಎಫ್ ತಳಿಯ ಹಸುವನ್ನು ಖರೀದಿಸಿದ್ದರು. ಅದು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಅದಕ್ಕೀಗ 2 ವರ್ಷ, ಇಲ್ಲಿ ಹಾಲು ಕೊಡ್ತಿರೋದು ಅದೇ ಕರು.
ಈ ಕರುವಿಗೆ ಗರ್ಬಧರಿಸಲೆಂದು ಇಂಜೆಕ್ಷನ್ ಕೊಡಿಸಿದ್ದರು. ಆದರೆ, ಇಂಜೆಕ್ಷನ್ ಪರಿಣಾಮನೋ ಏನೋ ಕೆಚ್ಚಲು ಬಂದು ಕರು ಹಾಲು ಕೊಡಲು ಪ್ರಾರಂಭಿಸಿದೆ. ಕರು ನೀಡುತ್ತಿರುವ ಹಾಲು ಉತ್ತಮ ಗುಣಮಟ್ಟದಾಗಿದ್ದು, ನಿತ್ಯವೂ ಹತ್ತಿರದ ಹಾಲಿನ ಡೈರಿಗೆ ನೀಡುತ್ತಿದ್ದಾರೆ.
ಇನ್ನು ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ಜನ ಕೆಂಪಯ್ಯನವರ ಮನೆಗೆ ಬರುತ್ತಿದ್ದಾರೆ. ಅದೇನೆ ಇರಲಿ ಸು ಗರ್ಭಧರಿಸಲಿ ಎಂದು ಇಂಜೆಕ್ಷನ್ ಕೊಡಿಸಿದ್ರೆ, ಆ ಹಸು ಹಾಲು ಕೊಡುತ್ತಿರುವುದೇ ನಿಜಕ್ಕೂ ವಿಸ್ಮಯವೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.