
ವಾಷಿಂಗ್ಟನ್(ಸೆ.27): ಭಾರತೀಯ ಮುಸಲ್ಮಾನರ ಕುರಿತು ಕಳವಳ ವ್ಯಕ್ತಪಡಿಸುವ, ಅವರಿಗಾಗಿ ಮಿಡಿಯುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಕ್ಕದ ಚೀನಾದ ಉಯಿಘರ್ ಮುಸಲ್ಮಾನರ ಹೀನಾಯ ಸ್ಥಿತಿಗತಿ ಕುರಿತು ಏಕೆ ಮಾತನಾಡುವುದಿಲ್ಲ...?
ಇಂತದ್ದೊಂದು ಪ್ರಶ್ನೆಯನ್ನು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಣಿ ಕೇಳಿದ ಈ ಪ್ರಶ್ನೆಗೆ ಇಮ್ರಾನ್ ಖಾನ್ಗೆ ತಲೆ ತಗ್ಗಿಸದೇ ಬೇರೆ ದಾರಿ ಇರಲಿಲ್ಲ. ಅಮೆರಿಕದಲ್ಲಿ ಕಾಶ್ಮೀರ ವಿವಾದ ಕೆದಕಿ ಹೀರೋ ಆಗಲು ಯತ್ನಿಸಿದ್ದ ಇಮ್ರಾನ್ ಇದೀಗ ಅಕ್ಷರಶಃ ಜೀರೋ ಆಗಿ ಸ್ವದೇಶಕ್ಕೆ ಮರಳಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಸಲ್ಮಾನರ ಕುರಿತು ಚಿಂತಿಸುವ ಇಮ್ರಾನ್, ಚೀನಾದ ಉಯಿಘರ್ ಮುಸಲ್ಮಾನರ ಕುರಿತು ಏಕೆ ಧ್ವನಿ ಎತ್ತುವುದಿಲ್ಲ ಎಂದು ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಅಲಿಸ್ ವೆಲ್ಸ್ ಪ್ರಶ್ನಿಸಿದ್ದಾರೆ.
ಚೀನಾದಲ್ಲಿ ಒಂದು ಮಿಲಿಯನ್ಗೂ ಅಧಿಕ ಉಯಿಘರ್ ಮುಸಲ್ಮಾನರನ್ನು ಬಂಧನದಲ್ಲಿರಿಸಲಾಗಿದ್ದು, ಈ ಕುರಿತು ಸೊಲ್ಲೆತ್ತದ ಇಮ್ರಾನ್, ಜಮ್ಮು ಮತ್ತು ಕಾಶ್ಮೀರದ ಮುಸಲ್ಮಾನರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಅಲಿಸ್ ವೆಲ್ಸ್ ಹರಿಹಾಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.