ಸಂಧಾನ ವಿಫಲ : ಕೋರ್ಟ್'ನಲ್ಲೇ ಬಗೆಹರಿಯಲಿ ಎಂದ ನಟರು

Published : Oct 25, 2018, 08:34 PM ISTUpdated : Oct 25, 2018, 09:06 PM IST
ಸಂಧಾನ ವಿಫಲ : ಕೋರ್ಟ್'ನಲ್ಲೇ  ಬಗೆಹರಿಯಲಿ ಎಂದ ನಟರು

ಸಾರಾಂಶ

ನನ್ನನ್ನು ತೇಜೋವಧೆ ಮಾಡಲು ಷಡ್ಯಂತ್ರ ನಡೆಯುತ್ತಿದೆ.  ನನ್ನ ಕುಟುಂಬ, ಹಿತೈಷಿಗಳು, ಸ್ನೇಹಿತರಿಗೆ ಜೊತೆಗೆ ನಾಲ್ಕು ರಾಜ್ಯಗಳ ಅಭಿಮಾನಿಗಳಿಗೆ ನೋವಾಗಿದ್ದು ಆರೋಪ ಕೋರ್ಟಿನಲ್ಲೇ ತೀರ್ಮಾನವಾಗಲಿ, ತಾವು  ಸಂಧಾನಕ್ಕೆ ಸಿದ್ದರಿಲ್ಲ - ಅರ್ಜುನ್ ಸರ್ಜಾ

ಬೆಂಗಳೂರು[ಅ.25]: ಅಂಬರೀಶ್ ನೇತೃತ್ವದಲ್ಲಿ   #MeToo ಆರೋಪಕ್ಕೆ  ಬಹುಭಾಷ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಅವರಿಗೆ ಕರ್ನಾಟಕ್ಕೆ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ.

ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು. ಆರೋಪ ನನ್ನೊಬ್ಬನ ಮೇಲಾಗಿದ್ದರೆ ಕ್ಷಮಿಸಿ ಬಿಡುತ್ತಿದ್ದೆ. ನನ್ನನ್ನು ತೇಜೋವಧೆ ಮಾಡಲು ಷಡ್ಯಂತ್ರ ನಡೆಯುತ್ತಿದೆ.  ನನ್ನ ಕುಟುಂಬ, ಹಿತೈಷಿಗಳು, ಸ್ನೇಹಿತರ ಜೊತೆಗೆ ನಾಲ್ಕು ರಾಜ್ಯಗಳ ಅಭಿಮಾನಿಗಳಿಗೂ ನೋವಾಗಿದ್ದು ಆರೋಪ ಕೋರ್ಟಿನಲ್ಲೇ ತೀರ್ಮಾನವಾಗಲಿ. ಸಂಧಾನಕ್ಕೆ ಸಿದ್ದರಿಲ್ಲ ಎಂದು ತಿಳಿಸಿದ್ದಾರೆ.

"

ನಾಳೆಯವರೆಗೂ ಕಾಯುತ್ತೇನೆ : ಶೃತಿ
ಅನ್ಯಾಯವಾಗಿರುವುದು ನನಗೆ. ಹೆಣ್ಣು ಮಕ್ಕಳ ಮೇಲೆ ತಪ್ಪು ಹೊರಿಸುವ ಕೆಲಸ ಆಗುತ್ತಿದೆ. ವಾಣಿಜ್ಯ ಮಂಡಳಿಯ ಮಾತಿಗೆ ಬೆಲೆ ಕೊಟ್ಟು ನಾಳೆಯವರೆಗೂ ಕಾಯಲಿದ್ದು ಯಾವುದೇ ಸಹಮತ ವ್ಯಕ್ತವಾಗದಿದ್ದರೆ ಕೋರ್ಟ್'ನಲ್ಲಿ ಪ್ರಕರಣ ದಾಖಲಿಸುತ್ತಾನೆ ಎಂದು ತಾವೂ ಕೂಡ ರಾಜಿಯಾಗಲು ಸಿದ್ದರಿಲ್ಲ ಎಂದು ತಿಳಿಸಿದರು.

"

ವಿವಾದ ದೊಡ್ಡದಾಗುವುದು ಬೇಡ ಎಂದ ಮಂಡಳಿ
ಸಂಧಾನ ಸಭೆ ನಡೆಸಿದ ಅಂಬರೀಶ್, ವಿವಾದವನ್ನು ದೊಡ್ಡದು ಮಾಡಿಕೊಳ್ಳುವುದು ಬೇಡ. ಮಂಡಳಿಯಲ್ಲೇ ಬಗೆಹರಿಸಿಕೊಳ್ಳಿ ಎಂದು ಇಬ್ಬರಿಗೂ ತಿಳಿಮಾತು ಹೇಳಿದ್ದೇವೆ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!