ತೆರಿಗೆಗಳ್ಳರಿಗೆ ಕಪ್ಪು ಹಣ ಬಿಳಿಯಾಗಿಸಲು ಈಗ ಮತ್ತೊಂದು ಅವಕಾಶ

Published : Dec 13, 2016, 02:11 PM ISTUpdated : Apr 11, 2018, 01:12 PM IST
ತೆರಿಗೆಗಳ್ಳರಿಗೆ ಕಪ್ಪು ಹಣ ಬಿಳಿಯಾಗಿಸಲು ಈಗ ಮತ್ತೊಂದು ಅವಕಾಶ

ಸಾರಾಂಶ

 ಬ್ಯಾಂಕಿನಲ್ಲಿಟ್ಟಿರುವ ಲೆಕ್ಕವಿಲ್ಲದ ಠೇವಣಿ​ಯನ್ನು ಘೋಷಿಸಿಕೊಳ್ಳುವ ಮಾದರಿ, ವಿಧಾನಗಳನ್ನು, ಅದಕ್ಕೆ ವಿಧಿಸಲಾಗುವ ತೆರಿಗೆ ಪ್ರಮಾಣ ಮತ್ತಿತರ ಮಾಹಿತಿಯನ್ನು ವಿವರಿಸಲಾಗುತ್ತದೆ.

ನವದೆಹಲಿ(ಡಿ.13): ಕೇಂದ್ರ ಸರ್ಕಾರ ತೆರಿಗೆಗಳ್ಳರಿಗೆ ಮತ್ತೊಂದು ಅವಕಾಶ ಒದಗಿಸುತ್ತಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಶೇ.50​ರಷ್ಟುತೆರಿಗೆ ಪಾವತಿಸಿ ಕಪ್ಪು ಹಣ ಬಿಳಿ ಹಣ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಲು ಈ ವಾರ ಕೇಂದ್ರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.
ನವೆಂಬರ್‌ 8 ರಂದು ಕೇಂದ್ರ ಸರ್ಕಾರ .500 ಮತ್ತು .1000 ನೋಟುಗಳ ರದ್ದು ಮಾಡಿದ ನಂತರ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಲೆಕ್ಕರಹಿತ ಮೊತ್ತಕ್ಕೆ ಇದು ಅನ್ವಯವಾಗುತ್ತದೆ. ಲೆಕ್ಕವಿಲ್ಲದಷ್ಟುಮೊತ್ತಕ್ಕೆ ಶೇ.50ರಷ್ಟುತೆರಿಗೆ ಪಾವತಿಸಿ ಬಿಳಿಯಾಗಿಸಿಕೊಳ್ಳಬಹುದು.
ಈ ವಾರ ಪ್ರಕಟಿಸುವ ಅಧಿಸೂಚನೆಯಲ್ಲಿ ಬ್ಯಾಂಕಿನಲ್ಲಿಟ್ಟಿರುವ ಲೆಕ್ಕವಿಲ್ಲದ ಠೇವಣಿ​ಯನ್ನು ಘೋಷಿಸಿಕೊಳ್ಳುವ ಮಾದರಿ, ವಿಧಾನಗಳನ್ನು, ಅದಕ್ಕೆ ವಿಧಿಸಲಾಗುವ ತೆರಿಗೆ ಪ್ರಮಾಣ ಮತ್ತಿತರ ಮಾಹಿತಿಯನ್ನು ವಿವರಿಸಲಾಗುತ್ತದೆ. ನವೆಂಬರ್‌ 29 ರಂದು ಲೋಕಸಭೆ ಅಂಗೀಕರಿಸಿದ ತೆರಿಗೆ ಕಾನೂನು (ಎರಡನೇ ತಿದ್ದುಪಡಿ) 2016ರಲ್ಲಿ ಅ ಅಂಶ ಸೇರಿತ್ತು.
ಡಿಸೆಂಬರ್‌ 30 ರಂದು ಹಳೆ ನೋಟು​ಗಳನ್ನು ಠೇವಣಿ ಇಡಲು ಕೊನೆ ಇದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟುಕಪ್ಪು ಹಣವನ್ನು ಬಿಳಿ ಹಣವನ್ನಾಗಿಸಲಾಗುತ್ತಿದೆ. ತೆರಿಗೆ ರೂಪದಲ್ಲಿ ಬಂದ ಶೇ.50ರಷ್ಟುಮೊತ್ತವನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಗೆ ಬಳಸಲಾಗುತ್ತದೆ. ಉಳಿದ ಮೊತ್ತವನ್ನು 4 ವರ್ಷಗಳ ಕಾಲ ಬ್ಯಾಂಕಿನಲ್ಲಿ ಬಡ್ಡಿ ರಹಿತ ಠೇವಣಿಯಾಗಿ ಇಡಬೇಕು ಎಂಬುದು ಪೂರ್ವ ನಿರ್ಧಾರಿತ ಷರತ್ತು.
ನವೆಂಬರ್‌ 29 ರಂದು ಲೋಕಸಭೆಯು ತೆರಿಗೆ ಕಾನೂನು ತಿದ್ದುಪಡಿಯನ್ನು ಹಣ​ಕಾಸು ಮಸೂದೆ ಸ್ವರೂಪದಲ್ಲಿ ಅಂಗೀಕರಿ​ಸಿದೆ. ರಾಜ್ಯಸಭೆಯು ಹಣಕಾಸು ಮಸೂದೆ​ಯನ್ನು ಲೋಕಸಭೆಯಲ್ಲಿ ಮಂಡಿಸಿದ 14 ದಿನಗಳೊಳಗೆ ಹಿಂದಕ್ಕೆ ಕಳುಹಿಸಲು ಅವ​ಕಾಶ ಇದೆ. ಡಿಸೆಂಬರ್‌ 14ಕ್ಕೆ ಅಗತ್ಯವಾಗಿ ಬೇಕಾದ 14 ದಿನಗಳ ಅವಧಿ ಪೂರ್ಣಗೊಳ್ಳು ತ್ತದೆ. ನಂತರ ಅದನ್ನು ರಾಷ್ಟ್ರಪತಿಗಳಿಗೆ ರವಾನಿಸಿ ನಂತರ ಅಧಿಸೂಚನೆ ಹೊರಡಿಸ ಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿ​ದ್ದಾರೆ. ಜೂನ್‌ ತಿಂಗಳಲ್ಲಿ ಘೋಷಿಸಿದ್ದ ಆದಾಯ ಘೋಷಣೆ ಯೋಜನೆ 2016ರ ಮಾದರಿ​ಯಲ್ಲೇ ಈ ಯೋಜನೆಯಡಿ ಆದಾಯ ಘೋಷಿಸಿಕೊಂಡರೆ ಅದರ ಮೂಲ​ವನ್ನು ತೆರಿಗೆ ಇಲಾಖೆ ಅಥವಾ ಇನ್ನಾ ವುದು ಸಕ್ಷಮ ಪ್ರಾಧಿಕಾರವು ಪ್ರಶ್ನಿಸುವುದಿಲ್ಲ. ಆದರೆ, ಫೆಮಾ, ಪಿಎಂಎಲ್‌ಎ ನಾರ್ಕೊಟಿಕ್ಸ್‌ ಮತ್ತು ವಿದೇಶಿ ಕಪ್ಪುಹಣ ಕಾಯ್ದೆಯಡಿ ಕ್ಷಮೆ ಇರುವುದಿಲ್ಲ.

(http://epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!