ನಿರ್ದೇಶಕ ಪ್ರೇಮ್, ನಟ ಸುದೀಪ್, ಸಾಹಸ ನಿರ್ದೇಶಕ ಮಾಸ್ ಮಾದ ಒಳಗೊಂಡ ಚಿತ್ರತಂಡ ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಚಿತ್ರೀಕರಣ ನಡೆಸುತ್ತಿತ್ತು.
ಬೆಳಗಾವಿ(ಮೇ.23): ಸುದೀಪ್ ಹಾಗೂ ಶಿವಣ್ಣ ಅಭಿನಯದ ಪ್ರೇಮ್ ನಿರ್ದೇಶನದಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಚಿತ್ರತಂಡ ಕೂದಲಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.
ನಿರ್ದೇಶಕ ಪ್ರೇಮ್, ನಟ ಸುದೀಪ್, ಸಾಹಸ ನಿರ್ದೇಶಕ ಮಾಸ್ ಮಾದ ಒಳಗೊಂಡ ಚಿತ್ರತಂಡ ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಚಿತ್ರೀಕರಣ ನಡೆಸುತ್ತಿತ್ತು.
ಈ ಸಂದರ್ಭದಲ್ಲಿ ಚಿತ್ರತಂಡ ಚಿತ್ರೀಕರಣ ನಡೆಸುತ್ತಿದ್ದ ಸ್ಥಳದಲ್ಲಿ ಭಾರಿ ಬಿರುಗಾಳಿ ಬೀಸಿದೆ. ಬಿರುಗಾಳಿಯ ರಬಸಕ್ಕೆ ಶೂಟಿಂಗ್ ಸ್ಥಳದಲ್ಲಿದ್ದ ಹಲವು ವಸ್ತುಗಳು ಚಲ್ಲಾಪಿಲ್ಲಿಯಾಗಿವೆ. ಬಿರುಗಾಳಿಯ ವೇಗಕ್ಕೆ ನಟ ಸುದೀಪ್, ನಿರ್ದೇಶಕ ಪ್ರೇಮ್ ಕೂಡ ಬೆಚ್ಚಿ ತಕ್ಷಣ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು. ಒಟ್ಟಿನಲ್ಲಿ ಸಿನಿಮಾ ತಂಡವನ್ನು ಅದೃಷ್ಟವೇ ಕಾಪಾಡಿದೆ ಎನ್ನಬಹುದು.
ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಸುದೀಪ್,ಶಿವರಾಜ್ ಕುಮಾರ್ ಬ್ರಿಟೀಷ್ ನಟಿ ಆಮಿ ಜಾಕ್ಸ್'ನ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ತೆಲುಗಿನ ಶ್ರೀಕಾಂತ್, ಶೃತಿ ಹರಿಹರನ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರದ ಶೇ.50ರಷ್ಟು ಭಾಗ ಗ್ರಾಫಿಕ್ಸ್ ಒಳಗೊಂಡಿದೆ. ಸಿನಿಮಾದ ಹಿಂದಿ ಹಕ್ಕುಗಳು ಈಗಾಗಲೇ 5.4 ಕೋಟಿಗೆ ಮಾರಾಟವಾಗಿದೆ.