
ಬೆಂಗಳೂರು(ಅ.28): ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳ ಬಂಧನದ ಎಕ್ಸ್ ಕ್ಲೂಸೀವ್ ಸುದ್ದಿಯನ್ನ ನಿನ್ನೆ ಸುವರ್ಣ ನ್ಯೂಸ್ ಬ್ರೇಕ್ ಮಾಡಿತ್ತು. ರುದ್ರೇಶ್ ಹತ್ಯೆ ನಂತರದಿಂದ ಆರೋಪಿಗಳನ್ನು ಬಂಧಿಸುವವರೆಗೆ ಪೊಲೀಸರ ತನಿಖೆ ಹೇಗಿತ್ತು ಅನ್ನೋ ಎಕ್ಸ್ ಕ್ಲೂಸೀವ್ ಮಾಹಿತಿಯನ್ನು ಸುವರ್ಣ ನ್ಯೂಸ್ ಇಂದು ನಿಮ್ಮ ಮುಂದಿಡಲಿದೆ.
ಬೆಂಗಳೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ನಂತರ ಪೊಲೀಸರು ಆರೋಪಿಗಳನ್ನು ಬೆನ್ನತ್ತಿದರೆ ನಮ್ಮ ಕ್ರೈಂ ವಿಭಾಗ ತನಿಖೆಯ ಜಾಡನ್ನು ಬೆನ್ನತ್ತಿತ್ತು. ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ರುದ್ರೇಶ್ ಕೊಂದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಸುವರ್ಣ ನ್ಯೂಸ್ನ ತೆರೆಮೇಲೆ ಅಪ್ಪಳಿಸುತ್ತಿದ್ದಂತೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆಬಿದ್ದಿತ್ತು. ನಮ್ಮ ವರದಿಯನ್ನು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಖಚಿತ ಪಡಿಸಿ ಆರೋಪಿಗಳನ್ನು ಬಂಧಿಸಿರುವುದು ಹೌದು ಎಂದಿದ್ದಾರೆ.
ನಿನ್ನೆ ಸ್ಫೋಟಕ ಸುದ್ದಿ ಬ್ರೇಕ್ ಮಾಡಿದ್ದ ನಾವು ಇವತ್ತು ರುದ್ರೇಶ್ ಕೊಲೆ ಮತ್ತು ಆರೋಪಿಗಳ ಬಂಧನದ ನಂತರ ಹುಟ್ಟಿಕೊಂಡಿರುವ ಹಲವು ಪ್ರಶ್ನೆಗಳಿಗೆ ಸುವರ್ಣ ನ್ಯೂಸ್ ಇಂದು ಉತ್ತರ ನೀಡಲಿದೆ.
-ಹಂತಕರ ಹಿಟ್ ಲಿಸ್ಟ್ನಲ್ಲಿ ಇದ್ದವರಾರು?
-ಹತ್ಯೆಗೆ ರುದ್ರೇಶ್ ಹೆಸರು ಫೈನಲ್ ಆಗಿದ್ಯಾಕೆ?
-ರುದ್ರೇಶ್ ಹತ್ಯೆಗೆ ಸ್ಕೆಚ್ ರೆಡಿಯಾಗಿದ್ದು ಎಲ್ಲಿ ?
-ಹತ್ಯೆಗೆ ಆರೋಪಿಗಳು ತರಬೇತಿ ಪಡೆದಿದ್ದು ಎಲ್ಲಿ?
-ಕೊಲೆ ಮಾಡಿದ ಹಂತಕರು ಎಲ್ಲೆಲ್ಲಿ ಹೋಗಿದ್ರು?
-ಎರಡು ಬಾರಿ ರುದ್ರೇಶ್ ಮುಗಿಸುವ ಸಂಚು ವಿಫಲವಾಗಿದ್ದೇಕೆ ?
-ಹತ್ಯೆಯ ಹಿಂದಿನ ಕೇರಳಾ ಲಿಂಕ್ನ ಕಹಾನಿ ಗೊತ್ತಾ?
-ಆರೋಪಿಗಳ ಹಿಂದಿರುವ ಪ್ರಭಾವಿಗಳಾರು?
ರುದ್ರೇಶ್ ಕೊಲೆ ಮಾಡಿದ್ದ ಆರೋಪಿಗಳ ಬಂಧನದ ನಂತರ ಉದ್ಭವಿಸಿರುವ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನ ಸುವರ್ಣ ನ್ಯೂಸ್ ಇಂದು ಇಡೀ ದಿನ ನಿಮ್ಮ ಮುಂದಿಡಲಿದೆ. ತಪ್ಪದೇ ಇವತ್ತು ಇಡೀ ದಿನ ಸುವರ್ಣ ನ್ಯೂಸ್ ವೀಕ್ಷಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.