
ಬೆಂಗಳೂರು[ನ.25]: ಶನಿವಾರ ತಡರಾತ್ರಿ ಕೊನೆಯುಸಿರೆಳೆದ ಹಿರಿಯ ನಟ ಅಂಬರೀಶ್ ಅವರು ಕೊನೆಯ ಬಾರಿಗೆ ಮಾಧ್ಯಮದವರ ಜತೆ ಮಾತಿಗೆ ಸಿಕ್ಕಿದ್ದು, ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಅವರ ಪತ್ನಿ ಸುಮಲತಾ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ತಾಯಿಗೆ ತಕ್ಕ ಮಗ’ಸಿನಿಮಾದ ವೇಳೆ.
ತಮ್ಮ ಪತ್ನಿ ಅಭಿನಯಿಸಿದ್ದ ಚಿತ್ರವನ್ನು ಅಂಬರೀಶ್ ನೋಡಿದ್ದರು. ಬಳಿಕ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾಧ್ಯಮದವರ ಮುಂದೆ ಸಂತಸ ವ್ಯಕ್ತಪಡಿಸಿದ್ದರು. ಇದು ಅಂಬರೀಶ್ ಅವರು ವೀಕ್ಷಣೆ ಮಾಡಿದ ಕೊನೆಯ ಚಿತ್ರ.
ಅಜಯ್ರಾವ್ ಹಾಗೂ ಸುಮಲತಾ ಅವರ ಮುಖ್ಯಭೂಮಿಕೆಯಲ್ಲಿ ‘ತಾಯಿಗೆ ತಕ್ಕ ಮಗ’ ಚಿತ್ರ ಮೂಡಿ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.