ತೆಲುಗು ನಟ ನಂದಮುರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣ

Published : Aug 29, 2018, 08:21 AM ISTUpdated : Sep 09, 2018, 09:49 PM IST
ತೆಲುಗು ನಟ ನಂದಮುರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣ

ಸಾರಾಂಶ

ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ.  ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ. 

ಹೈದರಾಬಾದ್  (ಆ. 29): ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ. 

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ. ಆಂಧ್ರ ಮಾಜಿ ಸಿಎಂ ಎನ್​ಟಿಆರ್​ ಹಿರಿಯ ಪುತ್ರ ಇವರು.  ಸೀತಯ್ಯ, ಸೀತಾರಾಮು, ಸಿವರಾಮ ರಾಜು,  ಟೈಗರ್​ ಹರಿಶ್ಚಂದ್ರ ಪ್ರಸಾದ್​ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 

"

ನಲಗುಂಡ ಬಳಿಯ ರಸ್ತೆಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮುಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್​ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.  

ನೆಲ್ಲೂರಿನಲ್ಲಿ ನಡೆದ ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಿ ಹೈದರಾಬಾದ್​ಗೆ ವಾಪಸ್ಸಾಗುವಾಗ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದಾರೆ. 

ಸಾವಿಗೂ ಮುನ್ನ ಹರಿಕೃಷ್ಣ ಮಾನವಿಯತೆ ಮೆರೆದ  ಧೀಮಂತ

ಸೆಪ್ಟೆಂಬರ್ 2 ರಂದು ತನ್ನ ಹುಟ್ಟು ಹಬ್ಬದ ದಿನ ತನ್ನ ಅಭಿಮಾನಿಗಳು ವ್ಯರ್ಥ ವಾಗಿ ಕೇಕ್,ಬ್ಯಾನರ್, ಸಂಭ್ರಮ ದ ದುಂಡು ವೆಚ್ಚ ಹಣ ಖರ್ಚುಗಳನ್ನು ಮಾಡಬೇಡಿ. ಅದೇ ಖರ್ಚು ಹಣವನ್ನು ಕೇರಳ,ಕೊಡಗು ನೆರೆಸಂತ್ರಸ್ಥರಿಗೆ ಧನ ಸಹಾಯ ಮಾಡಿ ಅದೇ ನೀವು ನನ್ನ ಹುಟ್ಟು ಹಬ್ಬಕ್ಕೆ ಸಲ್ಲಿಸುವ ಪ್ರೀತಿ ಎಂದು ತನ್ನ ಅಭಿಮಾನಿಗಳಿ ಸ್ವತಃ ಹರಿಕೃಷ್ಣ ರೇ ಕೈ ಬರಹದಿಂದ ಪತ್ರ ಬರೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ
ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ