ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

Published : Sep 21, 2019, 08:15 AM ISTUpdated : Sep 21, 2019, 08:58 AM IST
ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

ಸಾರಾಂಶ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಘೋಷಣೆ| ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!| 

ಹೈದರಾಬಾದ್‌[ಸೆ.21]: ದಸರಾ ಹಬ್ಬದ ಕೊಡುಗೆಯಾಗಿ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಕಂಪನಿ ನಿಗಮದ (ಎಸ್‌ಸಿಸಿಎಲ್‌) ನೌಕರರಿಗೆ ತಲಾ 1.01 ಲಕ್ಷ ರು. ಬೋನಸ್‌ ನೀಡುವುದಾಗಿ ತೆಲಂಗಾಣ ಸರ್ಕಾರ ಹೇಳಿದೆ.

ಸತತ 6ನೇ ವರ್ಷವೂ 11 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್‌!

ಈ ಬಗ್ಗೆ ವಿಧಾನಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಘೋಷಣೆ ಮಾಡಿದ್ದು, ಎಸ್‌ಸಿಸಿಎಲ್‌ ನೌಕರರು ದೇಶದ ಸಂಪತ್ತು ವೃದ್ಧಿಗೆ ಗಡಿಯಲ್ಲಿರುವ ಸೈನಿಕರಂತೆ ತಮ್ಮ ಜೀವ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಕಂಪನಿ ಈ ಬಾರಿ ದಾಖಲೆಯ 1765 ಕೋಟಿ ರು. ಲಾಭ ಗಳಿಸಿಕೊಂಡಿದೆ. ಹೀಗಾಗಿ ಹಾಗಾಗಿ ಅವರಿಗೆ ದಸರಾ ಕೊಡುಗೆಯಾಗಿ ತಲಾ 1,00,899ರು. ಬೋನಸ್‌ ವಿತರಿಸಲಾಗುತ್ತದೆ. ಇದರಿಂದ 48 ಸಾವಿರ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಬೋನಸ್ ಎಷ್ಟು ಕೊಡ್ತಿವಿ ಅಂತಾ ತೋರಿಸಲು ಹಣದ ಬೆಟ್ಟ ಕಟ್ಟಿದ ಕಂಪನಿ!

ಪ್ರತೀ ವರ್ಷ ಎಸ್‌ಸಿಸಿಎಲ್‌ ಉದ್ಯೋಗಿಗಳಿಗೆ ನೀಡಲಾಗುವ ಬೋನಸ್‌ನಲ್ಲಿ ಏರಿಕೆಯಾಗುತ್ತಿದ್ದು, 2013-14 ರಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಇರುವಾಗ 13,540ರು . ಬೋನಸ್‌ ನೀಡಲಾಗಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಬೋನಸ್‌ ಪ್ರಮಾಣ ಹೆಚ್ಚಳವಾಗಿದ್ದು, 2017-18ರಲ್ಲಿ ಶೇ. 27ರಷ್ಟುಲಾಭ ಗಳಿಸಿದ್ದರಿಂದ ತಲಾ 60,369ರು. ಬೋನಸ್‌ ಘೋಷಣೆ ಮಾಡಲಾಗಿತ್ತು. ಅಲ್ಲದೇ ಈ ಬಾರಿ ಕಂಪನಿ ದಾಖಲೆಯ 1725 ಕೋಟಿ ರು. ಲಾಭ ಗಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!