ಕನಕ ದೇವಿಗೆ ಸಿಎಂ ಮೂಗುತಿ: ಜನರಿಂದ ಮಂಗಳಾರತಿ!

Published : Jun 28, 2018, 08:31 PM IST
ಕನಕ ದೇವಿಗೆ ಸಿಎಂ ಮೂಗುತಿ: ಜನರಿಂದ ಮಂಗಳಾರತಿ!

ಸಾರಾಂಶ

ಇನ್ನೂ ನಿಂತಿಲ್ಲ ಕೆಸಿಆರ್ ಟೆಂಪಲ್ ರನ್ ವಿಜಯವಾಡಾದ ಕನಕ ದುರ್ಗ ದೇವಿ ದೇವಸ್ಥಾನ ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿದ ಸಿಎಂ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಸಿಎಂ ನಡೆ    

ಹೈದರಾಬಾದ್(ಜೂ.28): ಸರ್ಕಾರಿ ಖರ್ಚಿನಲ್ಲಿ ಹೋಮ ಮಾಡಿ ಜನರ ಕಂಗೆಣ್ಣಿಗೆ ಗುರಿಯಾಗಿದ್ದ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್, ಇದೀಗ ಮತ್ತೆ ಅಂತದ್ದೇ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೆಸಿಆರ್ ವಿಜಯವಾಡಾದ ದೇವಿ ಕನಕ ದುರ್ಗ ದೇವಸ್ಥಾನಕ್ಕೆ ಮೂಗುತಿ ಅರ್ಪಿಸಿದ್ದಾರೆ. ತೆಲಂಗಾಣ ರಾಜ್ಯ ಆಂಧ್ರದಿಂದ ವಿಭಜನೆಯಾದರೆ ಚಿನ್ನದ ಮೂಗುತಿ ಸಮರ್ಪಿಸುವುದಾಗಿ ಕೆಸಿಆರ್ ಈ ಹಿಂದೆ ದೇವಿ ಕನಕ ದುರ್ಗ ದೇವಸ್ಥಾನದಲ್ಲಿ ಹರಕೆ ಹೊತ್ತಿದ್ದರಂತೆ.

ಅದರಂತೆ ಇದೀಗ ರಾಜ್ಯ ವೀಭಜನೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿದ್ದಾರೆ. ಇಂದು ಕುಟುಂಬ ಸಮೇತರಾಗಿ ವಿಜಯವಾಡಾದ ದೇವಿ ಕನಕ ದುರ್ಗ ದೇವಸ್ಥಾನಕ್ಕೆ ಆಗಮಿಸಿದ ಕೆಸಿಆರ್, ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿ ಪುನೀತರಾದರು.

ಕೆಸಿಆರ್ ಈ ಹಿಂದೆ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಚಿನ್ನದ ಆಭರಣ ಸಮರ್ಪಿಸಿದ್ದರು. ಅಲ್ಲದೇ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಸರ್ಕಾರದ ಖಜಾನೆಯಿಂದ ೫ ಕೋಟಿ ರೂ. ದೇಣಿಗೆ ನೀಡಿದ್ದರು. ಕೆಸಿಆರ್ ಈ ರೀತಿ ಸಾವರ್ವಜನಿಕರ ಹಣ ಪೋಲು ಮಾಡುತ್ತಿರುವುದನ್ನು ಹಲವರು ಖಂಡಿಸಿದ್ದು, ಸಿಎಂ ರಾಜ್ಯದ ಅಭಿವೃದ್ಧಿಗೆ  ಈ ಹಣ ಖರ್ಚು ಮಾಡಿದ್ದರೆ ಆ ದೇವರೂ ಕೂಡ ಮೆಚ್ಚುತ್ತಿದ್ದ ಎಂದು ಹರಿಹಾಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ನಮಗೆ ಭಿಕ್ಷುಕರಂತೆ ಭಿಕ್ಷೆ ಹಾಕ್ತಾರೆ; ₹10,000 ಕೋಟಿ ಅನುದಾನ ಕೊಡಿ, ಇಲ್ಲ ಪ್ರತ್ಯೇಕ ರಾಜ್ಯ ಮಾಡಿ-ರಾಜು ಕಾಗೆ