
ತಿರುವಳ್ಳುವರ್ [ಜೂನ್ 24] ಮಕ್ಕಳ ಕೂಗಿಗೆ, ವಿನಂತಿಗೆ, ಭಾವನೆಗೆ ಶಿಕ್ಷಣ ಇಲಾಖೆ ಮಣಿದಿದೆ. ವರ್ಗಾವಣೆಗೊಂಡ ಶಿಕ್ಷಕನನ್ನು ಮುತ್ತಿದ ಮಕ್ಕಳ ಸುದ್ದಿ ಕೇಳಿ ತಿಳಿದ ಶಿಕ್ಷಣ ಇಲಾಖೆ ಅವರ ಟ್ರಾನ್ಸ್ ಫರ್ ವಿಚಾರ ಕೈಬಿಟ್ಟಿದೆ.
ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಶಾಲೆಯ ಇಂಗ್ಲಿಷ್ ಶಿಕ್ಷಕ ಭಗವಾನ್ ಅವರನ್ನು ಸುತ್ತಿಕೊಂಡು ಕಣ್ಣೀರು ಹಾಕಿದ್ದರು. ತಮಿಳುನಾಡಿನ ತಿರುವಳ್ಳುವರ್ ಸಮೀಪದ ವೆಲ್ಲಿಯಾಗರಮ್ ಸರಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್ ವರ್ಗಾವಣೆ ರದ್ದಾಗಿದ್ದು ಮಕ್ಕಳ ಸಂತಸ ಇದೀಗ ಇಮ್ಮಡಿಯಾಗಿದೆ
ಮಕ್ಕಳು ಶಿಕ್ಷಕನ ಸುತ್ತಿಕೊಂಡ ವಿಡಿಯೋ ವೈರಲ್
ಶಿಕ್ಷಕರನ್ನು ತಡೆಹಿಡಿದು ಮಕ್ಕಳು ಅಂಗಲಾಚಿ ಬೇಡಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಮಕ್ಕಳೊಂದಿಗೆ ಸದಾ ಬೆರೆತು ಅವರನ್ನು ಪಠ್ಯೇತರ ಚಟುವಟಿಕೆಯಲ್ಲೂ ಸದಾ ಮುಂದಿರುವಂತೆ ನೋಡಿಕೊಳ್ಳುತ್ತಿದ್ದ ಭಗವಾನ್ ಗೂ ಇದು ಸಂತಸ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.