ಲಂಚಕ್ಕಾಗಿ ಚಂದಾ ಸುವರ್ಣ ನ್ಯೂಸ್'ನಿಂದ ಲಂಚಬಾಕರ ಹಸಿವು ನೀಗಿಸಲು ವಿನೂತನ ಅಭಿಯಾನ

Published : Jun 03, 2017, 02:29 PM ISTUpdated : Apr 11, 2018, 12:55 PM IST
ಲಂಚಕ್ಕಾಗಿ ಚಂದಾ ಸುವರ್ಣ ನ್ಯೂಸ್'ನಿಂದ ಲಂಚಬಾಕರ ಹಸಿವು ನೀಗಿಸಲು ವಿನೂತನ ಅಭಿಯಾನ

ಸಾರಾಂಶ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 700 ರೂಪಾಯಿ ಲಂಚ ನೀಡಿಲ್ಲವೆಂಬ ಕಾರಣಕ್ಕಾಗಿ ಸಿಬ್ಬಂದಿ 20 ವಾರದ ಭ್ರೂಣವೊಂದನ್ನು ಮುಟ್ಟಲು ನಿರಾಕರಿಸಿರುವ ಅಮಾನವೀಯ ಘಟನೆ ನಡೆದಿದೆ. ಇನ್ನು ಸಿಬ್ಬಂದಿಗಳು ಕೇಳಿದಷ್ಟು ತನ್ನ ಬಳಿ ಹಣವಿಲ್ಲ ಎಂದು ಪ್ಲಾಸ್ಟಕ್ ಕವರ್'ನಲ್ಲೇ ಆ ಭ್ರೂಣವನ್ನು ಹಿಡಿದು ಒಂದೂವರೆ ಗಂಟೆಗಳ ಕಾಲ ಹಿಡಿದುಕೊಂಡು ಆಸ್ಪತ್ರೆಯ ವಾರ್ಡ್ ಹೊರಗಡೆ ನಿಂತ ದೃಶ್ಯಗಳು ಎಂತಹವರ ಮನವನ್ನೂ ಕರಗಿಸುವಂತಿವೆ. ಆದರೆ ಈ ವಿಚಾರದ ಕುರಿತಾಗಿ ಕಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಈ ಕುರಿತಾಗಿ ನಾವು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಹುಬ್ಬಳ್ಳಿ(ಜೂ.03): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 700 ರೂಪಾಯಿ ಲಂಚ ನೀಡಿಲ್ಲವೆಂಬ ಕಾರಣಕ್ಕಾಗಿ ಸಿಬ್ಬಂದಿ 20 ವಾರದ ಭ್ರೂಣವೊಂದನ್ನು ಮುಟ್ಟಲು ನಿರಾಕರಿಸಿರುವ ಅಮಾನವೀಯ ಘಟನೆ ನಡೆದಿದೆ. ಇನ್ನು ಸಿಬ್ಬಂದಿಗಳು ಕೇಳಿದಷ್ಟು ತನ್ನ ಬಳಿ ಹಣವಿಲ್ಲ ಎಂದು ಪ್ಲಾಸ್ಟಕ್ ಕವರ್'ನಲ್ಲೇ ಆ ಭ್ರೂಣವನ್ನು ಹಿಡಿದು ಒಂದೂವರೆ ಗಂಟೆಗಳ ಕಾಲ ಹಿಡಿದುಕೊಂಡು ಆಸ್ಪತ್ರೆಯ ವಾರ್ಡ್ ಹೊರಗಡೆ ನಿಂತ ದೃಶ್ಯಗಳು ಎಂತಹವರ ಮನವನ್ನೂ ಕರಗಿಸುವಂತಿವೆ. ಆದರೆ ಈ ವಿಚಾರದ ಕುರಿತಾಗಿ ಕಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಈ ಕುರಿತಾಗಿ ನಾವು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಈ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಈ ಕುರಿತಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್'ರವರ ಬಳಿ ಕೇಳಿದಾಗ 'ಈ ವಿಚಾರ ನನ್ನ ವ್ಯಾಪ್ತಿಗೆ ನನ್ನ ವ್ಯಾಪ್ತಿಗೆ ಬರುವುದಿಲ್ಲ, ವೈದ್ಯಕೀಯ ಶಿಕ್ಷಣ ಸಚಿವರ ವ್ಯಾಪ್ತಿಗೆ ಬರುತ್ತದೆ' ಎಂದು ಅಸಡ್ಡೆಯ ಉತ್ತರ ನೀಡಿದ್ದಾರೆ

ಇದೀಗ ಈ ಲಂಚ ಬಾಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಸುವರ್ಣ ನ್ಯೂಸ್ 'ಲಂಚಕ್ಕಾಗಿ ಚಂದಾ' ಎಂಬ ವಿನೂತನ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ಸುವರ್ಣ ನ್ಯೂಸ್ ಲಂಚಕ್ಕಾಗಿ ಬಡವರ ಪ್ರಾಣ ಹಿಂಡಬೇಡಿ, ಇದಕ್ಕಾಗಿ ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿ ನಾವು ಲಂಚ ನೀಡುತ್ತೇವೆ' ಎಂಬ ಸಂದೇಶ ನೀಡುತ್ತಿದೆ.

ವಾಹಿನಿಯ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯಡೆ ವ್ಯಕ್ತವಾಗಿದೆ. ಈ ಅಭಿಯಾನಕ್ಕೆ ಬೆಂಬಲಿಸಿರುವ ನಟ ಜಗ್ಗೇಶ್ ಅಭಿಯಾನಕ್ಕಾಗಿ ತನ್ನ ವತಿಯಿಂದ 5000 ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಇನ್ನು ನೆನಪಿರಲಿ ಸಿನಿಮಾ ನಟ ಪ್ರೇಮ್ ಕೂಡಾ ಪ್ರತಿಕ್ರಿಯೆ ನೀಡಿದ್ದು ಮಹಿಳೆಯ ಬಳಿ ಕೇಳಿದ ಲಂಚ ತಾನೇ ನೀಡುವುದಾಗಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ