ಸರ್ಕಾರ ಈಸ್ಟ್‌ ಇಂಡಿಯಾ ಕಂಪನಿಯೇ? ಕಮಲ್ ಹಾಸನ್ ಪ್ರಶ್ನೆ

Published : Jun 03, 2017, 02:22 PM ISTUpdated : Apr 11, 2018, 12:36 PM IST
ಸರ್ಕಾರ ಈಸ್ಟ್‌ ಇಂಡಿಯಾ ಕಂಪನಿಯೇ? ಕಮಲ್ ಹಾಸನ್ ಪ್ರಶ್ನೆ

ಸಾರಾಂಶ

ಜಿಎಸ್'ಟಿ ಪ್ರಾದೇಶಿಕ ಚಿತ್ರರಂಗಕ್ಕೆ ಮರಣಶಾಸನವಾಗಲಿದೆ ಎಂದು ಕಮಲ್ ಹಾಸನ್ ಆತಂಕ ವ್ಯಕ್ತಪಡಿಸಿದ್ದು, ಇದು ಜಾರಿಯಾಗಿದ್ದೇ ಆದಲ್ಲಿ ತಾವು ಚಿತ್ರರಂಗ ಬಿಡಬೇಕಾದೀತು. ಸರ್ಕಾರದ ವರ್ತನೆ ಈಸ್ಟ್‌ ಇಂಡಿಯಾ ಕಂಪನಿ ರೀತಿ ಇದೆ ಎಂದು ಎಚ್ಚರಿಸಿದ್ದಾರೆ.

ಚೆನ್ನೈ: ಜು.1ರಿಂದ ಜಾರಿಗೆ ಜಿಎಸ್‌ಟಿ ಕಾಯ್ದೆಯಲ್ಲಿ ಸಿನಿಮಾ ರಂಗದ ಮೇಲೆ ಹೇರಿರುವ ಶೇ.28 ತೆರಿಗೆಯನ್ನು ಖ್ಯಾತ ನಟ ಕಮಲ ಹಾಸನ್‌ ವಿರೋಧಿಸಿದ್ದಾರೆ.

ಇದು ಪ್ರಾದೇಶಿಕ ಚಿತ್ರರಂಗಕ್ಕೆ ಮರಣಶಾಸನವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಇದು ಜಾರಿಯಾಗಿದ್ದೇ ಆದಲ್ಲಿ ತಾವು ಚಿತ್ರರಂಗ ಬಿಡಬೇಕಾದೀತು. ಸರ್ಕಾರದ ವರ್ತನೆ ಈಸ್ಟ್‌ ಇಂಡಿಯಾ ಕಂಪನಿ ರೀತಿ ಇದೆ ಎಂದು ಎಚ್ಚರಿಸಿದ್ದಾರೆ.

ಹೀಗಾಗಿ ಚಿತ್ರರಂಗದ ಮೇಲಿನ ತೆರಿಗೆಯನ್ನು ಶೇ.5ರಿಂದ 18ರವರೆಗೆ ಮಾತ್ರ ನಿಗದಿಗೊಳಿಸಬೇಕು. ‘ಪ್ರಾದೇಶಿಕ ಚಲನಚಿತ್ರಗಳು ದೇಶದ ಚಲನಚಿತ್ರಗಳ ಆಧಾರ ಸ್ತಂಭ. ಹೀಗಿರುವಾಗ ಚಿತ್ರರಂಗಕ್ಕೆ ಇಷ್ಟು ತೆರಿಗೆ ಸರಿಯಲ್ಲ ಎಂದರು.

ಈವರೆಗೆ ರಾಜ್ಯಗಳ ವ್ಯಾಪ್ತಿಗೆ ಮನರಂಜನಾ ತೆರಿಗೆ ಬರುತ್ತಿತ್ತು. ಹೀಗಾಗಿ ಕರ್ನಾಟಕ ಸೇರಿ ಅನೇಕ ರಾಜ್ಯಗಳು ತಮ್ಮತಮ್ಮ ವ್ಯಾಪ್ತಿಯ ಪ್ರಾದೇ ಶಿಕ ಭಾಷಾ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದ್ದವು. ಈಗ ಜಿಎಸ್‌ಟಿ ಕೇಂದ್ರೀಯ ತೆರಿಗೆ ಆಗಿರುವ ಕಾರಣ ವಿನಾಯಿತಿ ನಿಂತು ಹೋಗುವ ಭೀತಿ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ