ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಅಧಿಕಾರಿಗೆ ನೋಟಿಸ್

By Suvarna Web DeskFirst Published Jun 22, 2017, 5:19 PM IST
Highlights

ಅದುಕೂಡನ್ಯಾಯಬೆಲೆಅಂಗಡಿಗೆಹೋಗುವಉಗ್ರಾಣದಗೋದಾಮಿನಲ್ಲೇಅಕ್ರಮವಾಗಿಅನ್ನಭಾಗ್ಯದಅಕ್ಕಿಗೆಕನ್ನಹಾಕುತ್ತಿರುವಘಟನೆಮಂಡ್ಯಜಿಲ್ಲೆಯಪಾಂಡವಪುರಪಟ್ಟಣದಲ್ಲಿಬೆಳಕಿಗೆಬಂದಿತ್ತು. ಅವ್ಯವಹಾರಬಗ್ಗೆಸುವರ್ಣನ್ಯೂಸ್ವಿಸ್ತೃತವಾಗಿವರದಿಪ್ರಸಾರಮಾಡಿತ್ತು.

ಮಂಡ್ಯ(ಜೂ.22): ಜಿಲ್ಲೆಯ ಪಾಂಡವಪುರ ಪಟ್ಟಣದ tapcms ಗೋದಾಮಿನಲ್ಲಿ  ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕುತ್ತಿರುವ ಬಗ್ಗೆ  ಸುವರ್ಣ ನ್ಯೂಸ್ ಪ್ರಸಾರ ಮಾಡಿದ ವರದಿಗೆ ಕೊನೆಗೂ ತಾಲೂಕು ಆಡಳಿತ ಎಚ್ಚೆತ್ತಿದೆ.

ತಾಲೂಕಿನ ತಹಶೀಲ್ದಾರ್ ಹನುಮಂತರಾಯಪ್ಪ ಸುವರ್ಣ ನ್ಯೂಸ್ ವರದಿ ನೋಡಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕುತ್ತಿದ್ದ ಕುರಿತು ಸಮಗ್ರ ವರದಿ ಕೊಡುವಂತೆ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ಶಿರಸ್ತೆದಾರ್ ಗಜಾನನ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಲ್ಲದೆ ಅಕ್ರಮ ಎಸಗಿರುವ ಸೊಸೈಟಿಗೂ ಕೂಡ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಭ್ರಷ್ಟರನ್ನು ಬಿಡೋ  ಇಲ್ಲ. ಕಾನೂನು ಕ್ರಮ ಜರುಗಿಸೋದಾಗಿ ಹೇಳಿದ್ದಾರೆ. ಅಲ್ಲದೆ ಗೋದಾಮಿನಲ್ಲಿರುವ ಅನ್ನಭಾಗ್ಯ ಅಕ್ಕಿಯ ಸ್ಟಾಕ್ ಪರಿಶೀಲನೆ ನಡೆಸುಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಅನ್ನಭಾಗ್ಯ

ಸಿಎಂ ಸಿದ್ದರಾಮಯ್ಯರ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗ್ತಿದೆ. ಅದು ಕೂಡ ನ್ಯಾಯಬೆಲೆ ಅಂಗಡಿಗೆ ಹೋಗುವ ಉಗ್ರಾಣದ ಗೋದಾಮಿನಲ್ಲೇ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕುತ್ತಿರುವ ಘಟ‌ನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿತ್ತು. ಈ ಅವ್ಯವಹಾರ  ಬಗ್ಗೆ ಸುವರ್ಣನ್ಯೂಸ್​ ವಿಸ್ತೃತವಾಗಿ  ವರದಿ ಪ್ರಸಾರ ಮಾಡಿತ್ತು. ಇದು ಸುವರ್ಣನ್ಯೂಸ್​ ಬಿಗ್​ ಇಂಪ್ಯಾಕ್ಟ್​

click me!