ಬಿಗ್ -3 ಖ್ಯಾತಿ ಜಯಪ್ರಕಾಶ್ ಶೆಟ್ಟಿಗೆ ‘ಹರ್ಮನ್ ಮೋಂಗ್ಲಿಂಗ್’ ಪ್ರಶಸ್ತಿ

Published : Jun 26, 2019, 08:59 PM IST
ಬಿಗ್ -3 ಖ್ಯಾತಿ ಜಯಪ್ರಕಾಶ್ ಶೆಟ್ಟಿಗೆ ‘ಹರ್ಮನ್ ಮೋಂಗ್ಲಿಂಗ್’ ಪ್ರಶಸ್ತಿ

ಸಾರಾಂಶ

ಸುವರ್ಣ ನ್ಯೂಸ್‌ ಗೆ ಮತ್ತೊಂದು ಹಿರಿಮೆ ದೊರೆತಿದೆ. 'ಸುವರ್ಣ ನ್ಯೂಸ್' ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಪ್ರತಿಷ್ಠಿತ ‘ಹರ್ಮನ್ ಮೋಂಗ್ಲಿಂಗ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು/ಕಾರವಾರ[ಜೂ. 26]   ಪ್ರತಿಷ್ಠಿತ ‘ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿ’ಗೆ ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ  ಭಾಜನರಾಗಿದ್ದಾರೆ.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರಕನ್ನಡ ಜಿಲ್ಲಾ ಘಟಕದಿಂದ ಪ್ರತಿವರ್ಷ ನೀಡಲಾಗುವ ರಾಜ್ಯ ಮಟ್ಟದ ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿ ಜಯಪ್ರಕಾಶ್ ಶೆಟ್ಟಿ ಅವರಿಗೆ ಸಂದಿದೆ.

ಜುಲೈ 1ರಂದು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ‌. ಕುಮಟಾ ಶಾಸಕ ದಿನಕರ ಶೆಟ್ಟಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹೀಮಂತರಾಜು, ಶಿವಾಜಿ ಕಾಲೇಜು ಬಾಡ ಕಾರವಾರ ಪ್ರಾಂಶುಪಾಲ ಶಿವಾನಂದ ನಾಯಕ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ಬಿಗ್ 3 ಜಯಪ್ರಕಾಶ್ ಶೆಟ್ಟಿಗೆ  'ಬೆಸ್ಟ್ ಆ್ಯಂಕರ್' ಗೌರವ

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಸ್ತುತ ಸಂದರ್ಭದಲ್ಲಿ ’ಪತ್ರಿಕೋದ್ಯಮ ಬಿಕ್ಕಟ್ಟುಗಳು: ಹೊಸ ಸಾಧ್ಯತೆಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕರ್ನಾಟಕ ಜರ್ನಲಿಸ್ಟ್ ಜಿಲ್ಲಾಧ್ಯಕ್ಷ ಕಡತೋಕ ಮಂಜು ತಿಳಿಸಿದ್ದಾರೆ.

ಬೆಸ್ಟ್ ಆ್ಯಂಕರ್ ಗೌರವ: ತಮ್ಮ ಬಿಗ್-3 ಕಾರ್ಯಕ್ರಮದ ಮೂಲಕ ಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳ ಮತ್ತು ರಾಜಕಾರಣದ ನಾಯಕರ, ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರವಾಗುವರೆಗೂ ಪಟ್ಟು ಬಿಡದ ಶೆಟ್ಟಿ ಅವರಿಗೆ ಮತ್ತೊಂದು ಪ್ರಶಸ್ತಿ ಸಂದಿದಂತಾಗಿದೆ.  ಎಕ್ಸ್ ಚೇಂಜ್ ಫಾರ್ ಮೀಡಿಯಾ ಸಂಸ್ಥೆಯ ಬೆಸ್ಟ್ ಆ್ಯಂಕರ್ ಪ್ರಶಸ್ತಿಗೆ ಜಯಪ್ರಕಾಶ್ ಶೆಟ್ಟಿ ಭಾಜನರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!