ಪಿಒಕೆಯಲ್ಲಿ ಸರ್ಜಿಕಲ್ ದಾಳಿ ಎಫೆಕ್ಟ್​: ‘ಡಾನ್​​’ ಪತ್ರಿಕೆಯ ಪರ್ತಕರ್ತನಿಗೆ ದಿಗ್ಭಂಧನ

By internet deskFirst Published Oct 11, 2016, 2:35 PM IST
Highlights

ಭಾರತದ ಕರಾರುವಕ್ಕು ದಾಳಿ ನಂತ್ರ ಪಾಕ್‌ ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಹಾಗೂ ಒಡಕು ಮೂಡಿದ್ಯಂತೆ.ಈ ಬಗ್ಗೆ ವರದಿ ಮಾಡಿದ್ದ ಪ್ರಸಿದ್ಧ ಡಾನ್‌ ಪತ್ರಿಕೆಯ ಪತ್ರಕರ್ತ ಸಿರಿಲ್‌ ಅಲ್‌ ಮೇಡಾ ಅವರಿಗೆ ದೇಶದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ. 

ಕರಾಚಿ(ಅ.11): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ನಾಶಪಡಿಸಲು ಭಾರತ ಕಳೆದ ತಿಂಗಳಲ್ಲಿ  ಸರ್ಜಿಕಲ್‌ ದಾಳಿ ಪಾಕಿಸ್ತಾನದಲ್ಲಿ ಭಾರೀ ಬಿರುಗಾಳಿ ಬೀಸಿದೆ. 

ಭಾರತದ ಕರಾರುವಕ್ಕು ದಾಳಿ ನಂತ್ರ ಪಾಕ್‌ ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಹಾಗೂ ಒಡಕು ಮೂಡಿದ್ಯಂತೆ.

Latest Videos

ಈ ಬಗ್ಗೆ ವರದಿ ಮಾಡಿದ್ದ ಪ್ರಸಿದ್ಧ ಡಾನ್‌ ಪತ್ರಿಕೆಯ ಪತ್ರಕರ್ತ ಸಿರಿಲ್‌ ಅಲ್‌ ಮೇಡಾ ಅವರಿಗೆ ದೇಶದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ. 

ಪತ್ರಕರ್ತ ಸಿರಿಲ್‌ ಅಲ್‌ ಮೇಡಾ ಅವರ ಹೆಸರನ್ನು ‘ಎಕ್ಸಿಟ್‌ ಕಂಟ್ರೋಲ್‌ ಲಿಸ್ಟ್‌' ಅಂತಂದ್ರೆ ನಿರ್ಗಮನ ನಿರ್ಬಂಧ ಪಟ್ಟಿಗೆ ಸೇರಿಸಲಾಗಿದೆ. 

ಇದ್ರಿಂದ ಪರ್ತಕರ್ತ ದೇಶದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ ಅಂತ ‘ದ ಕ್ವಿಂಟ್‌' ವರದಿ ಮಾಡಿದೆ.

ಇನ್ನು ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಿರಿಲ್​, ಪಾಕಿಸ್ತಾನ ನನ್ನ ಮಾತೃಭೂಮಿ. ಯಾವ್ದೇ ಕಾರಣಕ್ಕೂ ದೇಶ ಬಿಡಲ್ಲ ಅಂತ ಟ್ವೀಟ್ ಮಾಡಿದ್ದಾರೆ.
 

click me!