ಬೆಳಗಾವಿಯಲ್ಲಿ 'ಮರಿ ವೀರಪ್ಪನ್' ಸೆರೆ

Published : Oct 11, 2016, 01:34 PM ISTUpdated : Apr 11, 2018, 12:42 PM IST
ಬೆಳಗಾವಿಯಲ್ಲಿ 'ಮರಿ ವೀರಪ್ಪನ್' ಸೆರೆ

ಸಾರಾಂಶ

ಸದ್ಯಕ್ಕೆ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಳಗಾವಿಯಿಂದ ವಿಯೆಟ್ನಾಂ ಹಾಗೂ ಚೀನಾ ದೇಶಗಳಿಗೆ ಈ ವನ್ಯ ಜೀವಿ ವಸ್ತುಗಳನ್ನು ಸಾಗಾಟ ಮಾಡುವ ಜಾಲದಲ್ಲಿ ಸಲೀಂ ಖಾನ್ ಸೌದಾಗರ್ ಕಿಂಗ್ ಪಿನ್ ಎನ್ನಲಾಗಿದೆ.

ಬೆಳಗಾವಿ(ಅ. 11): ಇಲ್ಲಿಯ ಪೊಲೀಸರು ಮರಿ ವೀರಪ್ಪನ್'ನೊಬ್ಬನ್ನು ಸೆರೆಹಿಡಿದಿದ್ದಾರೆ. ಶೆಟ್ಟಿ ಗಲ್ಲಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಸಲೀಂ ಖಾನ್ ಸೌದಾಗರ್ ಎಂಬಾತನನ್ನು ಬಂಧಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜಿಂಕೆ ಮತ್ತು ಸಾರಂಗದ ಕೊಂಬುಗಳು, ಪೆಂಗ್ವಿಲಿನ್ ಚಿಪ್ಪುಗಳು, ಆನೆದಂತ ಸೇರಿದಂತೆ ಅಪಾರ ಪ್ರಮಾಣದ ಪ್ರಾಣಿ ವಸ್ತುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಒಂದು ಅಂದಾಜಿನ ಪ್ರಕಾರ, ಈತನಿಂದ ವಶಪಡಿಸಿಕೊಂಡ ಈ ವಸ್ತುಗಳ ಮೌಲ್ಯ ನೂರು ಕೋಟಿಗೂ ಅಧಿಕವೆನ್ನಲಾಗಿದೆ. ಸಿಪಿಐ ಜಾವೀದ್ ಮುಶಾಪುರ, ಅಡಿವೇಶ ಗೂದಿಗೊಪ್ಪ ನೇತೃತ್ವದಲ್ಲಿ ಪೊಲೀಸ್ ತಂಡವು ಈತನನ್ನು ಹಿಡಿಯಲು ಯಶಸ್ವಿಯಾಗಿ ಬಲೆ ಬೀಸಿತ್ತು. ಸದ್ಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯಕ್ಕೆ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಳಗಾವಿಯಿಂದ ವಿಯೆಟ್ನಾಂ ಹಾಗೂ ಚೀನಾ ದೇಶಗಳಿಗೆ ಈ ವನ್ಯ ಜೀವಿ ವಸ್ತುಗಳನ್ನು ಸಾಗಾಟ ಮಾಡುವ ಜಾಲದಲ್ಲಿ ಸಲೀಂ ಖಾನ್ ಸೌದಾಗರ್ ಕಿಂಗ್ ಪಿನ್ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ