ಮಾಧ್ಯಮಗಳ ತಪ್ಪು ವರದಿ ಮಾನ ಹಾನಿಕರವಲ್ಲ: ಸುಪ್ರೀಂಕೋರ್ಟ್

Published : Jan 10, 2018, 12:57 PM ISTUpdated : Apr 11, 2018, 12:45 PM IST
ಮಾಧ್ಯಮಗಳ ತಪ್ಪು ವರದಿ ಮಾನ ಹಾನಿಕರವಲ್ಲ: ಸುಪ್ರೀಂಕೋರ್ಟ್

ಸಾರಾಂಶ

 ಹಗರಣಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ತಪ್ಪು ವರದಿ ಮಾನಹಾನಿಕರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾಧ್ಯಮಗಳಿಗೆ ಪರಿಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡಬೇಕೆಂದು  ಎಂದೂ ಪ್ರತಿಪಾದಿಸಿದೆ.

ನವದೆಹಲಿ (ಜ.10):  ಹಗರಣಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ತಪ್ಪು ವರದಿ ಮಾನಹಾನಿಕರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾಧ್ಯಮಗಳಿಗೆ ಪರಿಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡಬೇಕೆಂದು  ಎಂದೂ ಪ್ರತಿಪಾದಿಸಿದೆ.

ಜತೆಗೆ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಮರುಜೀವ ನೀಡಲು ನಿರಾಕರಿಸಿದೆ. ಹಗರಣವೊಂದರ ಬಗ್ಗೆ ಮಾಧ್ಯಮಗಳ ವರದಿಯಲ್ಲಿ ದೋಷ ಇರಬಹುದು ಅಥವಾ ಅತಿ ಉತ್ಸಾಹವೇ ಕಂಡುಬರಬಹುದು. ಆದರೆ, ಮಾಧ್ಯಮಗಳಿಗೆ ನಾವು ಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವೃಕ್ತಿ ಸ್ವಾತಂತ್ರ್ಯ ಒದಗಿಸಬೇಕು. ತಪ್ಪಾಗಿ ವರದಿ ಆಗಬಹುದು. ಹಾಗಂತ ಮಾನನಷ್ಟ  ಸಮರಕ್ಕೆ ದೂಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಭೂಮಿ ಮಂಜೂರಾತಿ ಸಂಬಂಧ ತಮ್ಮ ಕುಟುಂಬದ ವಿರುದ್ಧ 2010 ರಲ್ಲಿ ಅಪಮಾನಕಾರಿ ವರದಿ ಪ್ರಸಾರ ಮಾಡಿದ್ದ ಐಬಿಎನ್ ಹಿಂದಿ ವಾಹಿನಿಯ ಆಗಿನ ಮುಖ್ಯಸ್ಥ ರಾಜ್‌ದೀಪ್ ಸರ್ದೇಸಾಯಿ ಹಾಗೂ ವರದಿಗಾರರ ವಿರುದ್ಧ  ಬಿಹಾರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೆ. ಆದರೆ ಅದನ್ನು ಪಟನಾ ಹೈಕೋರ್ಟ್ ೨೦೧೭ರ ಸೆ.೧೨ರಂದು ರದ್ದುಗೊಳಿಸಿದೆ ಎಂದು ಬಿಹಾರದ ಸಚಿವೆ ಹಾಗೂ ಹಿರಿಯ ಅಧಿಕಾರಿಯೊಬ್ಬರ ದಂಪತಿಯ ಪುತ್ರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು  ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದ ನ್ಯಾಯಪೀಠ, ಪ್ರಜಾಪ್ರಭುತ್ವದಲ್ಲಿ  ಅರ್ಜಿದಾರರು ಸಹಿಷ್ಣುತೆಯಿಂದ ಇರುವುದನ್ನು ಕಲಿಯಬೇಕು. 2011 ರಿಂದ ಪ್ರಕರಣ ಮುಂದುವರಿದುಕೊಂಡು ಬಂದಿದೆ. ಸಾಕಷ್ಟು ಸಮಯ ಹಾಗೂ ಹಣ ವೆಚ್ಚವಾಗಿದೆ. ಮಾನನಷ್ಟ ಮೊಕದ್ದಮೆ ಹೂಡಲು ಸಂವಿಧಾನದತ್ತ ಅವಕಾಶ ನಿಮಗಿದೆ. ಆದರೆ, ತಪ್ಪು ಮಾಧ್ಯಮ ವರದಿ ಮಾನನಷ್ಟ ಎಂದು ಪರಿಗಣಿತವಾಗುವುದಿಲ್ಲ ಎಂದು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ