ಸುಪ್ರೀಂಗೆ ನಾಲ್ವರು ನೂತನ ನ್ಯಾಯಮೂರ್ತಿಗಳ ನೇಮಕ| ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಕೃಷ್ಣ ಮುರಾರಿ, ಎಸ್. ರವೀಂದ್ರ ಭಟ್, ಜೆ. ವಿ ರಾಮಸುಬ್ರಮಣಿಯನ್ ಹಾಗೂ ಹೃಷಿಕೇಶ್ ರಾಯ್| ಸುಪ್ರೀಂ ಜಡ್ಜ್ ಗಳ ಸಂಖ್ಯೆ 34ಕ್ಕೇರಿಕೆ!
ನವದೆಹಲಿ[ಸೆ.23]: ಸುಪ್ರೀಂ ಕೋರ್ಟ್ ಗೆ ನೂತನ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದ್ದು, ಸಿಜೆಐ ರಂಜನ್ ಗೋಗೋಯ್ ಸಮ್ಮುಖದಲ್ಲಿ ಇವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಕೃಷ್ಣ ಮುರಾರಿ, ಎಸ್. ರವೀಂದ್ರ ಭಟ್, ಜೆ. ವಿ ರಾಮಸುಬ್ರಮಣಿಯನ್ ಹಾಗೂ ಹೃಷಿಕೇಶ್ ರಾಯ್ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ನೂತನ ನಾಲ್ವರು ನ್ಯಾಯಮೂರ್ತಿಗಳು. ಕೇಂದ್ರ ಸರ್ಕಾರ ಈ ಹಿಂದೆಯೇ ಇವರ ನಿಯುಕ್ತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ಸಿಜೆಐ ರಂಜನ್ ಗೊಗೋಯ್ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಹಲವಾರು ವಕೀಲರು ಹಾಗೂ ನ್ಯಾಯಾಧೀಶರು ಹಾಜರಿದ್ದರು.
The sitting strength of Supreme Court of India rose to 34 for the first time in its history as 4 new judges were sworn in today.
Chief Justice of
J Gogoi administered the oath of office to J.V Ramasubramanian, Krishna Murari, S Ravindra Bhat and Hrishikesh Roy. pic.twitter.com/Lon6L7QwxP
ನ್ಯಾಯಮೂರ್ತಿ ಮುರಾರಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ರಾಜಸ್ಥಾನ ಹೈ ಕೋರ್ಟ್, ನ್ಯಾಯಮೂರ್ತಿ ಜೆ. ವಿ ರಾಮಸುಬ್ರಮಣಿಯನ್ ಹಿಮಾಚಲ ಪ್ರದೇಶ ಹೈಕೋರ್ಟ್ ಹಾಗೂ ಹೃಷಿಕೇಶ್ ರಾಯ್ ಕೇರಳ ಹೈಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇದ್ದ 4 ನ್ಯಾಯಮೂರ್ತಿಗಳ ಸ್ಥಾನಕ್ಕೆ ನಾಲ್ವರು ಜಡ್ಜ್ಗಳನ್ನು ನೇಮಕ ಮಾಡುವಂತೆ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. 4 ಜಡ್ಜ್ಗಳ ನೇಮದಿಂದ ಸುಪ್ರೀಂ ಕೋರ್ಟ್ನಲ್ಲಿ ಎರಡು ಹೆಚ್ಚುವರಿ ಕೋರ್ಟ್ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಸುಪ್ರೀಂ ಕೋರ್ಟ್ನಲ್ಲಿ 15 ಕೋರ್ಟ್ ರೂಂಗಳಿದ್ದವು, ಈಗ ಅವುಗಳ ಸಂಖ್ಯೆ 17 ಮಾಡಲಾಗಿದೆ.