ಕುವೆಂಪು ಮನೆ ಕಂಡು ಪುಳಕಿತರಾದ ಸುಧಾಮೂರ್ತಿ

Published : Aug 13, 2017, 08:14 PM ISTUpdated : Apr 11, 2018, 12:54 PM IST
ಕುವೆಂಪು ಮನೆ ಕಂಡು ಪುಳಕಿತರಾದ ಸುಧಾಮೂರ್ತಿ

ಸಾರಾಂಶ

ಮುಂದಿನ ದಿನಗಳಲ್ಲಿ ಇದೇ ರೀತಿ ಹೂವುಗಳಿಂದ ರಾಜ್ಯದ ಹಲವು ಸ್ಮಾರಕಗಳು ಮೂಡಬೇಕು ಎಂದು ಸಲಹೆ ನೀಡಿದರು. 2ನೇ ಶನಿವಾರ ಬಹುತೇಕ ಕಚೇರಿಗಳಿಗೆ ರಜೆ ಇದ್ದ ಕಾರಣ ಲಾಲ್‌ಬಾಗ್ ಒಟ್ಟು 42 ಸಾವಿರ ಮಂದಿ ಭೇಟಿ ನೀಡಿದ್ದಾರೆ. 37 ಸಾವಿರ ಮಂದಿ ಹಿರಿಯರು ಹಾಗೂ 5 ಸಾವಿರ ಮಕ್ಕಳು ಕೆಂಪುತೋಟದಲ್ಲಿ ಅರಳಿದ ಕುವೆಂಪು ಕಂಡು ಬೆರಗಾದರು.

ಬೆಂಗಳೂರು(ಆ.13): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪುಷ್ಪಗಳಿಂದ ನಿರ್ಮಿಸಿರುವ ಕುವೆಂಪು ಮನೆಯನ್ನು ಕಂಡು ಪುಳಕಿತರಾಗಿದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ಕುಪ್ಪಳಿಯ ಕುವೆಂಪು ಅವರ ಮೂಲಮನೆಯಷ್ಟೇ ಸೊಗಸಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಭಾರತೀಯ ಅಂಚೆ ಇಲಾಖೆ ಕುವೆಂಪು ಸ್ಮರಣಾರ್ಥ ಹೊರ ತಂದಿರುವ ಅಂಚೆ ಚೀಟಿಯ ಪ್ರತಿರೂಪವನ್ನು ಲಾಲ್‌ಬಾಗ್‌ನ ಗ್ಲಾಸ್ ಹೌಸ್‌ನಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕುವೆಂಪು ಪ್ರತಿಷ್ಠಾನ ಹಾಗೂ ಲಾಲ್‌ಬಾಗ್ ಸಿಬ್ಬಂದಿ ಅವರ ಅಪಾರಶ್ರಮ ಹಾಗೂ ಆಸಕ್ತಿಯಿಂದ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಬಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಹೂವುಗಳಿಂದ ರಾಜ್ಯದ ಹಲವು ಸ್ಮಾರಕಗಳು ಮೂಡಬೇಕು ಎಂದು ಸಲಹೆ ನೀಡಿದರು. 2ನೇ ಶನಿವಾರ ಬಹುತೇಕ ಕಚೇರಿಗಳಿಗೆ ರಜೆ ಇದ್ದ ಕಾರಣ ಲಾಲ್‌ಬಾಗ್ ಒಟ್ಟು 42 ಸಾವಿರ ಮಂದಿ ಭೇಟಿ ನೀಡಿದ್ದಾರೆ. 37 ಸಾವಿರ ಮಂದಿ ಹಿರಿಯರು ಹಾಗೂ 5 ಸಾವಿರ ಮಕ್ಕಳು ಕೆಂಪುತೋಟದಲ್ಲಿ ಅರಳಿದ ಕುವೆಂಪು ಕಂಡು ಬೆರಗಾದರು.

ಒಟ್ಟು 21.8 ಲಕ್ಷ ಹಣ ಸಂಗ್ರವಾಗಿದೆ. ಆ.15ರಂದು ಫಲಪುಷ್ಪ ಪ್ರದರ್ಶನ ಕೊನೆಗೊಳ್ಳಲಿದೆ. ಭಾನುವಾರ ಹಿರಿಯರಿಗೆ 60 ಹಾಗೂ ಮಕ್ಕಳಿಗೆ 20 ಟಿಕೆಟ್ ದರ ನಿಗದಿಪಡಿಸಲಾಗಿದೆ. ಸೋಮವಾರ ಶಾಲಾ ಮಕ್ಕಳಿಗೆ ಪ್ರವೇಶ ಉಚಿತವಿರಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂದಿನ 4 ದಿನ ಬ್ಯಾಂಕ್ ಬಂದ್! ಸಿಬ್ಬಂದಿಗಳ ಮುಷ್ಕರ ಹಣಕಾಸು ವ್ಯವಹಾರ ಸ್ಥಗಿತ!
ಎಲ್ಲಾ ಅಸಭ್ಯ ಹೇಳಿಕೆ ಕ್ರಿಮಿನಲ್ ಅಪರಾಧವಲ್ಲ : ಚಂದ್ರಚೂಡ್‌