
ಮೊರಾದಬಾದ್, ಉತ್ತರ ಪ್ರದೇಶ: ಗಡಿ ಕಾಯುವ ಯೊಧರಿಗೆಂದೇ ಇಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಬೃಹತ್ ರಾಖಿಯೊಂದನ್ನು ತಯಾರಿಸಿ ಕಳುಹಿಸಿದ್ದಾರೆ.
100 ಅಡಿ ಉದ್ದವಿರುವ ರಾಖಿಯಲ್ಲಿ ಬೇರೆ ಬೇರೆ ರಾಜ್ಯದ ಸಂಸ್ಕೃತಿಗಳು ಹಾಗೂ ಬೇರೆ ಬೇರೆ ಧರ್ಮಗಳ ನಡುವಿನ ಏಕತೆಯನ್ನು ಬಿಂಬಿಸಲಾಗಿದೆ.
ಕಲರ್ ಹಾಳೆಗಳು, ಬಟ್ಟೆ, ಲೇಸ್ ಹಾಗೂ ಆಲಂಕಾರಿಕ ಸಾಮಾಗ್ರಿಗಳಿಂದ ರಚಿಸಲ್ಪಟ್ಟ ಈ ರಾಖಿಯು ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಎತ್ತಿ ಹಿಡಿಯುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ಬಳಿಕ ಇಂತಹ ದು ರಾಖಿಯನ್ನು ಗಡಿ ಕಾಯುವ ಯೋಧರಿಗೆ ಕಳುಹಿಸಿಕೊಡುವ ವಿಚಾರ ಹೊಳೆಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಬೃಹತ್ ರಾಖಿಯನ್ನು ವಿದ್ಯಾರ್ಥಿಗಳು ಯೋಧರಿಗೆ ಕಳುಹಿಸಿದ್ದಾರೆ.
(ಚಿತ್ರ: ಏಎನ್ಐ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.