ಸ್ಟುಡೆಂಟ್ ಪಾಸ್ ಇದೆ ಎಂಬ ಕಾರಣಕ್ಕೆ ಹೊರದಬ್ಬಿದ ಕಂಡಕ್ಟರ್ : ಅಂಗವಿಕಲನಾದ ವಿದ್ಯಾರ್ಥಿ

Published : Oct 24, 2017, 06:04 PM ISTUpdated : Apr 11, 2018, 01:10 PM IST
ಸ್ಟುಡೆಂಟ್ ಪಾಸ್ ಇದೆ ಎಂಬ ಕಾರಣಕ್ಕೆ ಹೊರದಬ್ಬಿದ ಕಂಡಕ್ಟರ್ : ಅಂಗವಿಕಲನಾದ ವಿದ್ಯಾರ್ಥಿ

ಸಾರಾಂಶ

ಸ್ಟುಡೆಂಟ್​ ಪಾಸ್ ಇದೆ ಎಂಬ ಕಾರಣಕ್ಕೆ ಕಂಡಕ್ಟ್'ರ್ ಬಸ್'ನಿಂದ ಹೊರದಬ್ಬಿ ಬಸ್'ನ ಬಾಗಿಲು ಹಾಕಿದ್ದಾನೆ. ಈ ಸಂದರ್ಭದಲ್ಲಿ ಉಲ್ಲೇಖ್ ಕಾಲು ಬಸ್ ಚಕ್ರಕ್ಕೆ ಸಿಲುಕಿ ಕಟ್ ಆಗಿದೆ.

ಮೈಸೂರು(ಅ.24): ಬಸ್ ಕಂಡಕ್ಟ್'ರ್ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಯೊಬ್ಬ ಕಾಲು ಕಳೆದುಕೊಂಡ ಘಟನೆ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬನ್ನೂರಿನ ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದುಕೊಂಡ ವಿದ್ಯಾರ್ಥಿ. ಮೈಸೂರಿನ ಸದ್ವಿದ್ಯಾ ಪೌಢಶಾಲೆಯ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತನನ್ನು ಸ್ಟುಡೆಂಟ್​ ಪಾಸ್ ಇದೆ ಎಂಬ ಕಾರಣಕ್ಕೆ ಕಂಡಕ್ಟ್'ರ್ ಬಸ್'ನಿಂದ ಹೊರದಬ್ಬಿ ಬಸ್'ನ ಬಾಗಿಲು ಹಾಕಿದ್ದಾನೆ. ಈ ಸಂದರ್ಭದಲ್ಲಿ ಉಲ್ಲೇಖ್ ಕಾಲು ಬಸ್ ಚಕ್ರಕ್ಕೆ ಸಿಲುಕಿ ಕಟ್ ಆಗಿದೆ.

ತುಂಡಾದ ಕಾಲನ್ನು ಶಸ್ತ್ರ'ಚಿಕಿತ್ಸೆ ಮೂಲಕ ತೆಗೆದ ವೈದ್ಯರು.  ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಉಲ್ಲೇಖ್​​ಗೆ ಚಿಕಿತ್ಸೆ ನೀಡಲಾಗುತ್ತದೆ. ಕೆಎಸ್'ಆರ್'ಟಿಸಿ ಕಂಡಕ್ಟರ್, ಡ್ರೈವರ್​ ವಿರುದ್ಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ : ವೀಡಿಯೋ ಭಾರಿ ವೈರಲ್