ತಮಿಳುನಾಡಿನಲ್ಲಿ 2 ಸಾವಿರಕ್ಕೂ ಹೆಚ್ಚು ರೈತರ ಬಂಧನ

Published : Oct 17, 2016, 12:41 PM ISTUpdated : Apr 11, 2018, 12:49 PM IST
ತಮಿಳುನಾಡಿನಲ್ಲಿ 2 ಸಾವಿರಕ್ಕೂ ಹೆಚ್ಚು ರೈತರ ಬಂಧನ

ಸಾರಾಂಶ

ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈ(ಅ.17): ಕಾವೇರಿ ನಿರ್ವಹಣ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡಿನಲ್ಲಿ 48 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ರೈಲ್ ರಖೋ ಪ್ರತಿಭಟನೆಯಲ್ಲಿ 8 ಜಿಲ್ಲೆಗಳಿಂದ 2 ಸಾವಿರ ರೈತರು ಸೇರಿದಂತೆ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನಾಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಐತಿಹಾಸಿಕ ತೀರ್ಪು ಬರಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಸುಪ್ರೀಕೋರ್ಟ್​ನತ್ತ ನೆಟ್ಟಿದೆ.

2 ರಾಜ್ಯಗಳ ಬಗ್ಗೆ ತಜ್ಞರು ಸಲ್ಲಿಸಿರುವ ವರದಿ ಇಲ್ಲಿದೆ

ಕರ್ನಾಟಕದ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಕರ್ನಾಟಕದಲ್ಲಿ ಈ ವರ್ಷ ಶೇ. 51ರಷ್ಟು ಕಡಿಮೆ ಮಳೆಯಾಗಿದೆ.
* ಕಾವೇರಿ ಕೊಳ್ಳದಲ್ಲಿ  25 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿದೆ
* ಕಾವೇರಿಯ 4 ಜಲಾಶಯಗಳಲ್ಲಿ  19 ವರ್ಷಗಳಲ್ಲೇ ಅತ್ಯಂತ ಕಡಿಮೆ ಒಳಹರಿವು ಇದೆ
* 1436 ಕೆರೆಗಳ ಪೈಕಿ ಶೇ.53ರಷ್ಟು ಕೆರೆಗಳಲ್ಲಿ ನೀರೇ ಇಲ್ಲ
* ಶೇ. 39ರಷ್ಟು ಕೆರೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರಿನ ಸಂಗ್ರಹವಿದೆ
* ಕಾವೇರಿ ಕೊಳ್ಳ ಪ್ರದೇಶದ ಅಂತರ್ಜಲ ಪ್ರಮಾಣವೂ ಅಪಾಯಕಾರಿ ಸ್ಥಿತಿಯಲ್ಲಿದೆ
* ಕಾವೇರಿ ಭಾಗದ 48 ತಾಲೂಕುಗಳಲ್ಲಿ 42 ತಾಲೂಕುಗಳು ಬರಪೀಡಿತ ಪ್ರದೇಶಗಳು
* ಮಳೆ ಸರಿಯಾಗಿರದ ಕಾರಣ ಮಂಡ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ.

ತಮಿಳುನಾಡಿನ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಮೆಟ್ಟೂರಿನಲ್ಲಿ 31 ಟಿಎಂಸಿಗಿಂತ ಹೆಚ್ಚು ನೀರಿನ ಲೈವ್ ಸ್ಟೋರೇಜ್ ಇದೆ.
* ಈಶಾನ್ಯ ಮುಂಗಾರು ಬಾಕಿ ಇದ್ದು, ಅದು ಸರಿಯಾಗಿ ಆದರೆ 70 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹವಾಗಲಿದೆ.
* 2017ರವರೆಗೆ ತಮಿಳುನಾಡಿಗೆ ಬೇಕಾದ ನೀರು 163 ಟಿಎಂಸಿ; ನೀರು ಬರುವ ಸಾಧ್ಯತೆ ಇರುವುದು 148 ಟಿಎಂಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಹೆಸರು ತಪ್ಪಾಗಿ ಹೇಳಿದರೆ ದಂಡ ಫಿಕ್ಸ್‌!
'ಬೆಳಗಾವಿ ಜಿಲ್ಲೆ ವಿಭಜನಗೆ ಅಂತಲೇ ಸಿಎಂ ಬಂದಿದ್ದರು' ಸಿದ್ದರಾಮಯ್ಯ ಮನಸಲ್ಲಿದ್ದ ಬಿಗ್ ಪ್ಲಾನ್ ಬಿಚ್ಚಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!