ಫೇಸ್'ಬುಕ್'ನಲ್ಲಿ ಕ್ಷಮೆ ಕೇಳಿದ ಮಜಾ ಸೃಜನ್: ಮಾಡಿದ ಎಡವಟ್ಟೇನು?

Published : Mar 21, 2017, 12:51 AM ISTUpdated : Apr 11, 2018, 12:35 PM IST
ಫೇಸ್'ಬುಕ್'ನಲ್ಲಿ ಕ್ಷಮೆ ಕೇಳಿದ ಮಜಾ ಸೃಜನ್: ಮಾಡಿದ ಎಡವಟ್ಟೇನು?

ಸಾರಾಂಶ

‘ಮಜಾ ಟಾಕೀಸ್‌' ಶೋನಲ್ಲಿ ‘ಮಚ್ಚು ಕೊಡ್ರೋ' ಅಂತ ಹೇಳುವ ಸೃಜನ್‌ ಲೋಕೇಶ್‌ ಅವರ ಫನ್ನಿ ಡೈಲಾಗ್‌ ಕೊಂಚ ವಿವಾದಕ್ಕೆ ತಿರುಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುಜಗಳ, ಮನಸ್ತಾಪ, ಟ್ರೋಲ್‌ ನಡೆದಿದ್ದು ನಿಮಗೇ ಗೊತ್ತು. ಈಗ ಆ ಶೋನಲ್ಲಿ ಆಡಿದ ಇನ್ನೊಂದು ಮಾತು ವಿವಾದಕ್ಕೆ ತಿರುಗಿದೆ. ಕಳೆದ ವೀಕೆಂಡ್‌ನಲ್ಲಿ ಪ್ರಸಾರವಾದ ಈ ಶೋನಲ್ಲಿ ಯಾರೋ ಪ್ರೇಕ್ಷಕರು, ‘ಸರ್ಕಾರಿ ಕೆಲಸ ದೇವರ ಕೆಲಸ ಅಂತ ಹೇಳ್ತಾರೆ, ಅದೇ ಐಟಿಯಲ್ಲಿ ಕೆಲಸ ಮಾಡುವವರನ್ನು ಏನಂತ ಕರೆಯಬಹುದು' ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ‘ಭೂತಾರಾಧನೆ ಅಂತ ಕರೀಬಹುದು, ಅದೂ ರಾತ್ರಿ ಮಾಡುವ ಕೆಲಸ, ಐಟಿಯವರದೂ ರಾತ್ರಿ ಮಾಡುವ ಕೆಲಸ' ಅಂತ ತಮಾ,ಎಯಾಗಿ ಉತ್ತರ ಕೊಡುತ್ತಾರೆ. 

ಬೆಂಗಳೂರು(ಮಾ.21): ಮಜಾ ಟಾಕೀಸ್‌' ಶೋನಲ್ಲಿ ‘ಮಚ್ಚು ಕೊಡ್ರೋ' ಅಂತ ಹೇಳುವ ಸೃಜನ್‌ ಲೋಕೇಶ್‌ ಅವರ ಫನ್ನಿ ಡೈಲಾಗ್‌ ಕೊಂಚ ವಿವಾದಕ್ಕೆ ತಿರುಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುಜಗಳ, ಮನಸ್ತಾಪ, ಟ್ರೋಲ್‌ ನಡೆದಿದ್ದು ನಿಮಗೇ ಗೊತ್ತು. ಈಗ ಆ ಶೋನಲ್ಲಿ ಆಡಿದ ಇನ್ನೊಂದು ಮಾತು ವಿವಾದಕ್ಕೆ ತಿರುಗಿದೆ. ಕಳೆದ ವೀಕೆಂಡ್‌ನಲ್ಲಿ ಪ್ರಸಾರವಾದ ಈ ಶೋನಲ್ಲಿ ಯಾರೋ ಪ್ರೇಕ್ಷಕರು, ‘ಸರ್ಕಾರಿ ಕೆಲಸ ದೇವರ ಕೆಲಸ ಅಂತ ಹೇಳ್ತಾರೆ, ಅದೇ ಐಟಿಯಲ್ಲಿ ಕೆಲಸ ಮಾಡುವವರನ್ನು ಏನಂತ ಕರೆಯಬಹುದು' ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ‘ಭೂತಾರಾಧನೆ ಅಂತ ಕರೀಬಹುದು, ಅದೂ ರಾತ್ರಿ ಮಾಡುವ ಕೆಲಸ, ಐಟಿಯವರದೂ ರಾತ್ರಿ ಮಾಡುವ ಕೆಲಸ' ಅಂತ ತಮಾ,ಎಯಾಗಿ ಉತ್ತರ ಕೊಡುತ್ತಾರೆ. 

ಇದರಿಂದ ಸೋಶಿಯಲ್‌ ಮೀಡಿಯಾಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಭೂತಾರಾಧನೆಯನ್ನು ತೀರಾ ಕೆಳಮಟ್ಟದಲ್ಲಿ ಐಟಿಗೆ ಹೋಲಿಸಿ ಮಾತಾಡಲಾಗಿದೆ, ಭಾವನೆಗೆ ಘಾಸಿ ಮಾಡಲಾಗಿದೆ ಅಂತ ಪ್ರತಿಭಟಿಸಿದ್ದಾರೆ. ಇದಕ್ಕೆಲ್ಲಾ ಉತ್ತರಿಸಿರುವ ಅವರು, ‘ಭೂತರಾಧನೆ ಬಗ್ಗೆ ನಾನು ತಮಾಷೆ ಮಾಡಿದೆ ಅಂತ ಕೆಲವು ಫೇಸ್‌ ಬುಕ್‌ ಪೋಸ್ಟ್‌ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ. ನಾನು ಸಹ ಭೂತರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ. ನನಗೆ ಅದರ ಅರಿವಿರುವುದರಿಂದಲೇ ನಾನು 'ಭೂತರಾಧನೆ' ಪ್ರಸ್ತಾಪಿಸಿದ್ದು. ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸೋ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನನಗಿರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ' ಎಂದು ಪ್ರಕರಣವನ್ನು ಅಲ್ಲಿಗೆ ಮುಗಿಸಿದ್ದಾರೆ ಸೃಜನ್‌ ಲೋಕೇಶ್‌.

ವರದಿ: ಕನ್ನಡ ಪ್ರಭ, ಸಿನಿ ವಾರ್ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ